ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಚಂದ್ರೇಗೌಡ (ಮದಲೂರು ಕ್ಷೇತ್ರ) ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸಿದ್ದಪ್ಪ (ಬರಗೂರು ಕ್ಷೇತ್ರ) ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ಸಿ.ರಾಮರಾಜು (ಕಳ್ಳಂಬೆಳ್ಳ ಕ್ಷೇತ್ರ) ಹಾಗೂಕಾಂಗ್ರೆಸ್ ಬೆಂಬಲಿತ ರಂಗಮ್ಮ (ಬುಕ್ಕಾಪಟ್ಟಣ ಕ್ಷೇತ್ರ) ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಜಿ.ಚಂದ್ರೇಗೌಡ ಅವರಿಗೆ 9 ಮತಗಳು, ಸಿದ್ದಪ್ಪ ಅವರಿಗೆ 6 ಮತಗಳು ಬಂದರೆ ಒಂದು ಮತ ತಿರಸ್ಕೃತ ಗೊಂಡಿತು.