<p>ಶಿರಾ: ದೇಶದಲ್ಲಿ ಮಹಾನ್ ನಾಯಕರನ್ನು ಕೇವಲ ಜಯಂತಿಗೆ ಸೀಮಿತ ಮಾಡಿರುವುದು ನೋವಿನ ವಿಚಾರ. ಅವರ ತತ್ವ, ಸಿದ್ಧಾಂತಗಳನ್ನು ಅರಿತುಕೊಂಡಿದ್ದರೆ ಜಾತೀಯತೆ ಕೊನೆಯಾಗುತ್ತಿತ್ತು ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹ.ರಾ.ಮಹೇಶ್ ಹೇಳಿದರು.</p>.<p>ವಿವೇಕಾನಂದ ಕ್ರೀಡಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ನಡೆದ ಬುದ್ಧ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಅಂಬೇಡ್ಕರ್ ನಮಗೆಲ್ಲ ಬುದ್ಧನ ಪ್ರಜ್ಞೆ ನೀಡಿದ್ದಾರೆ. ಅದನ್ನು ನಾವು ಅನುಸರಿಸದಿರುವುದು ನೋವಿನ ಸಂಗತಿ. ಎಲ್ಲರೂ ಬುದ್ಧನ ತತ್ವಗಳನ್ನು ಅನುಸರಿಸಿ ಜಾತಿ ಎನ್ನುವ ರೋಗಕ್ಕೆ ಬುದ್ಧನ ತತ್ವಗಳು ಮದ್ದು ಎಂದು ಅಂಬೇಡ್ಕರ್ ಬರೆದಿದ್ದಾರೆ ಎಂದರು.</p>.<p>ಕ.ಅ.ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ ಮಾತನಾಡಿ, ಶೂದ್ರರಿಗೆ ನೂರು ವರ್ಷಗಳ ಹಿಂದೆ ಶಿಕ್ಷಣ ಇರಲಿಲ್ಲ. ಅಂಬೇಡ್ಕರ್ ಸಂವಿಧಾನ ನೀಡಿದ ಮೇಲೆ ಎಲ್ಲರಿಗೂ ಶಿಕ್ಷಣ ದೊರಕಿದೆ. ಶಿಕ್ಷಣ ಪಡೆದವರು ಅರಿವು ಮೂಡಿಸುತ್ತಿಲ್ಲ ಎಂದರು.</p>.<p>ದಸಂಸ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡುವ ಮೂಲಕ ಗುಲಾಮಗಿರಿಗೆ ಅಂತ್ಯಹಾಡಿ ಜಾತಿ ವ್ಯವಸ್ಥೆಯನ್ನು ತೊಲಗಿಸಿ ವ್ಯಕ್ತಿ ಗೌರವಕ್ಕೆ ಭದ್ರ ತಳಹದಿ ಹಾಕಿದರು ಎಂದರು.</p>.<p>ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವರಾಜು ಎನ್., ಆರ್.ವಿ.ಪುಟ್ಟಕಾಮಯ್ಯ, ಬರಗೂರು ನರಸಪ್ಪ, ಬೀರನಹಳ್ಳಿ ನರಸಪ್ಪ, ಅರ್ಷದ್, ಗೋಮಾರದನಹಳ್ಳಿ ಮಂಜುನಾಥ್, ನರಸಿಂಹರಾಜು.ಬಿ.ಕೆ., ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು.</p>.<p>ನಿವೃತ್ತ ಪ್ರಾಂಶುಪಾಲ ರಾಮಚಂದ್ರಪ್ಪ, ಭಂತೇಜಿ ಧಮ್ಮವೀರ, ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ತಾಲ್ಲೂಕು ದಸಂಸ ಅಧ್ಯಕ್ಷ ಶಿವಾಜಿನಗರ ತಿಪ್ಪೇಸ್ವಾಮಿ, ಕೋದಂಡರಾಮ, ರಾಜು.ಆರ್.ಆರ್., ಶ್ರೀರಂಗಪ್ಪ, ಚನ್ನನಕುಂಟೆ ರಂಗನಾಥ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-17-2141806161</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಾ: ದೇಶದಲ್ಲಿ ಮಹಾನ್ ನಾಯಕರನ್ನು ಕೇವಲ ಜಯಂತಿಗೆ ಸೀಮಿತ ಮಾಡಿರುವುದು ನೋವಿನ ವಿಚಾರ. ಅವರ ತತ್ವ, ಸಿದ್ಧಾಂತಗಳನ್ನು ಅರಿತುಕೊಂಡಿದ್ದರೆ ಜಾತೀಯತೆ ಕೊನೆಯಾಗುತ್ತಿತ್ತು ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹ.ರಾ.ಮಹೇಶ್ ಹೇಳಿದರು.</p>.<p>ವಿವೇಕಾನಂದ ಕ್ರೀಡಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ನಡೆದ ಬುದ್ಧ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಅಂಬೇಡ್ಕರ್ ನಮಗೆಲ್ಲ ಬುದ್ಧನ ಪ್ರಜ್ಞೆ ನೀಡಿದ್ದಾರೆ. ಅದನ್ನು ನಾವು ಅನುಸರಿಸದಿರುವುದು ನೋವಿನ ಸಂಗತಿ. ಎಲ್ಲರೂ ಬುದ್ಧನ ತತ್ವಗಳನ್ನು ಅನುಸರಿಸಿ ಜಾತಿ ಎನ್ನುವ ರೋಗಕ್ಕೆ ಬುದ್ಧನ ತತ್ವಗಳು ಮದ್ದು ಎಂದು ಅಂಬೇಡ್ಕರ್ ಬರೆದಿದ್ದಾರೆ ಎಂದರು.</p>.<p>ಕ.ಅ.ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ ಮಾತನಾಡಿ, ಶೂದ್ರರಿಗೆ ನೂರು ವರ್ಷಗಳ ಹಿಂದೆ ಶಿಕ್ಷಣ ಇರಲಿಲ್ಲ. ಅಂಬೇಡ್ಕರ್ ಸಂವಿಧಾನ ನೀಡಿದ ಮೇಲೆ ಎಲ್ಲರಿಗೂ ಶಿಕ್ಷಣ ದೊರಕಿದೆ. ಶಿಕ್ಷಣ ಪಡೆದವರು ಅರಿವು ಮೂಡಿಸುತ್ತಿಲ್ಲ ಎಂದರು.</p>.<p>ದಸಂಸ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡುವ ಮೂಲಕ ಗುಲಾಮಗಿರಿಗೆ ಅಂತ್ಯಹಾಡಿ ಜಾತಿ ವ್ಯವಸ್ಥೆಯನ್ನು ತೊಲಗಿಸಿ ವ್ಯಕ್ತಿ ಗೌರವಕ್ಕೆ ಭದ್ರ ತಳಹದಿ ಹಾಕಿದರು ಎಂದರು.</p>.<p>ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವರಾಜು ಎನ್., ಆರ್.ವಿ.ಪುಟ್ಟಕಾಮಯ್ಯ, ಬರಗೂರು ನರಸಪ್ಪ, ಬೀರನಹಳ್ಳಿ ನರಸಪ್ಪ, ಅರ್ಷದ್, ಗೋಮಾರದನಹಳ್ಳಿ ಮಂಜುನಾಥ್, ನರಸಿಂಹರಾಜು.ಬಿ.ಕೆ., ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು.</p>.<p>ನಿವೃತ್ತ ಪ್ರಾಂಶುಪಾಲ ರಾಮಚಂದ್ರಪ್ಪ, ಭಂತೇಜಿ ಧಮ್ಮವೀರ, ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ತಾಲ್ಲೂಕು ದಸಂಸ ಅಧ್ಯಕ್ಷ ಶಿವಾಜಿನಗರ ತಿಪ್ಪೇಸ್ವಾಮಿ, ಕೋದಂಡರಾಮ, ರಾಜು.ಆರ್.ಆರ್., ಶ್ರೀರಂಗಪ್ಪ, ಚನ್ನನಕುಂಟೆ ರಂಗನಾಥ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-17-2141806161</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>