<p>ಶಿರಾ: ಪರವಾನಗಿ ಪಡೆದ ಭೂಮಾಪಕರು ಎರಡು ತಿಂಗಳಿನಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಭೂಮಾಪನ ಇಲಾಖೆ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಜಮೀನು ವ್ಯವಹಾರ ಹಾಗೂ ಸರ್ಕಾರಿ ಕೆಲಸಗಳಿಗಾಗಿ ರೈತರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ.</p>.<p>ತಾಲ್ಲೂಕಿನಲ್ಲಿ 34 ಮಂದಿ ಸರ್ಕಾರದಿಂದ ಪರವಾನಗಿ ಪಡೆದ ಭೂಮಾಪಕರಿದ್ದಾರೆ. ಇವರೆಲ್ಲರೂ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಕಚೇರಿಯ ಕಪಾಟು ಸೇರಿವೆ.</p>.<p>ಹದ್ದುಬಸ್ತು 1966, ದರಖಾಸ್ತು1621, 11 ಇ ಸ್ಕೆಚ್ 406 ಅರ್ಜಿ, ತತ್ಕಾಲ್ ಪೋಡಿ 407, ಇತರೆ ಕೆಲಸಗಳ 42 ಅರ್ಜಿಗಳು ಸೇರಿದಂತೆ 4442 ಅರ್ಜಿ ಬಾಕಿ ಉಳಿದಿವೆ.</p>.<p>ಭೂಮಾಪಕರ ಮುಷ್ಕರದಿಂದಾಗಿ ಬ್ಯಾಂಕ್ ಸಾಲ ಪಡೆಯಲು ಹಾಗೂ ತುರ್ತು ಆರ್ಥಿಕ ಅಗತ್ಯತೆ ಇರುವವರಿಗೆ ಇದರಿಂದಾಗಿ ಭಾರೀ ಹೊಡೆತ ಬಿದ್ದಿದೆ.</p>.<p>ಭೂದಾಖಲೆಗಳ ಇಲಾಖೆಯಲ್ಲಿ 21 ಭೂಮಾಪಕರ ಹುದ್ದೆಗಳು ಮಂಜೂರಾಗಿದೆ. ಇದರಲ್ಲಿ 4 ಹುದ್ದೆಗಳು ಖಾಲಿ ಇದೆ. ಇರುವ 17 ಮಂದಿಯಲ್ಲಿ ಒಬ್ಬರನ್ನು ಬೇರೆ ತಾಲ್ಲೂಕಿಗೆ ನಿಯೋಜನ ಮಾಡಿದ್ದಾರೆ. ಪರವಾನಗಿ ಪಡೆದ ಭೂಮಾಪಕರು ಮುಷ್ಕರ ನಡೆಸುತ್ತಿರುವುದರಿಂದ ಈ ಕೆಲಸಗಳಿಗಾಗಿ ಇಬ್ಬರನ್ನು ನಿಯೋಜನೆ ಮಾಡಲಾಗಿದೆ.</p>.<p>ಜಮೀನು ಖರೀದಿ, ನಿವೇಶನ ಮಾರಾಟ ಅಥವಾ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡಿಕೊಳ್ಳಲು ಭೂಮಾಪನ ಇಲಾಖೆಯ ನಕ್ಷೆ ಮತ್ತು ಹದ್ದುಬಸ್ತು ಅತ್ಯಗತ್ಯ. ಪೋಡಿ, ದಾರಿ ನಕ್ಷೆಯಂತಹ ಮೂಲಭೂತ ಕೆಲಸಗಳಿಗಾಗಿ ಗ್ರಾಮೀಣ ಭಾಗದ ಜನರು ಕಚೇರಿಗೆ ಅಲೆಯುವಂತಾಗಿದೆ.</p>.<p>ಸರ್ಕಾರ ಮತ್ತು ಭೂಮಾಪಕರ ನಡುವಿನ ಸಂಘರ್ಷದಲ್ಲಿ ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ರೈತರು ಮಕ್ಕಳ ಮದುವೆ, ಮಕ್ಕಳ ಶಿಕ್ಷಣ, ತುರ್ತು ಚಿಕಿತ್ಸೆಗಾಗಿ ಜಮೀನು ಮಾರಾಟ ಮಾಡಲು ಹೋದರೆ ಹದ್ದುಬಸ್ತು ಮತ್ತು ನಕ್ಷೆ ಕಡ್ಡಾಯವಾಗಿ ಬೇಕು. ಈಗ ಸರ್ವೆ ಕೆಲಸಗಳು ನಡೆಯದ ಹಿನ್ನೆಲೆಯಲ್ಲಿ ಖರೀದಿ-ಮಾರಾಟ ಸ್ಥಗಿತಗೊಂಡಿದ್ದು ರೈತರು ಹೆಚ್ಚು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-17-420693025</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಾ: ಪರವಾನಗಿ ಪಡೆದ ಭೂಮಾಪಕರು ಎರಡು ತಿಂಗಳಿನಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಭೂಮಾಪನ ಇಲಾಖೆ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಜಮೀನು ವ್ಯವಹಾರ ಹಾಗೂ ಸರ್ಕಾರಿ ಕೆಲಸಗಳಿಗಾಗಿ ರೈತರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ.</p>.<p>ತಾಲ್ಲೂಕಿನಲ್ಲಿ 34 ಮಂದಿ ಸರ್ಕಾರದಿಂದ ಪರವಾನಗಿ ಪಡೆದ ಭೂಮಾಪಕರಿದ್ದಾರೆ. ಇವರೆಲ್ಲರೂ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಕಚೇರಿಯ ಕಪಾಟು ಸೇರಿವೆ.</p>.<p>ಹದ್ದುಬಸ್ತು 1966, ದರಖಾಸ್ತು1621, 11 ಇ ಸ್ಕೆಚ್ 406 ಅರ್ಜಿ, ತತ್ಕಾಲ್ ಪೋಡಿ 407, ಇತರೆ ಕೆಲಸಗಳ 42 ಅರ್ಜಿಗಳು ಸೇರಿದಂತೆ 4442 ಅರ್ಜಿ ಬಾಕಿ ಉಳಿದಿವೆ.</p>.<p>ಭೂಮಾಪಕರ ಮುಷ್ಕರದಿಂದಾಗಿ ಬ್ಯಾಂಕ್ ಸಾಲ ಪಡೆಯಲು ಹಾಗೂ ತುರ್ತು ಆರ್ಥಿಕ ಅಗತ್ಯತೆ ಇರುವವರಿಗೆ ಇದರಿಂದಾಗಿ ಭಾರೀ ಹೊಡೆತ ಬಿದ್ದಿದೆ.</p>.<p>ಭೂದಾಖಲೆಗಳ ಇಲಾಖೆಯಲ್ಲಿ 21 ಭೂಮಾಪಕರ ಹುದ್ದೆಗಳು ಮಂಜೂರಾಗಿದೆ. ಇದರಲ್ಲಿ 4 ಹುದ್ದೆಗಳು ಖಾಲಿ ಇದೆ. ಇರುವ 17 ಮಂದಿಯಲ್ಲಿ ಒಬ್ಬರನ್ನು ಬೇರೆ ತಾಲ್ಲೂಕಿಗೆ ನಿಯೋಜನ ಮಾಡಿದ್ದಾರೆ. ಪರವಾನಗಿ ಪಡೆದ ಭೂಮಾಪಕರು ಮುಷ್ಕರ ನಡೆಸುತ್ತಿರುವುದರಿಂದ ಈ ಕೆಲಸಗಳಿಗಾಗಿ ಇಬ್ಬರನ್ನು ನಿಯೋಜನೆ ಮಾಡಲಾಗಿದೆ.</p>.<p>ಜಮೀನು ಖರೀದಿ, ನಿವೇಶನ ಮಾರಾಟ ಅಥವಾ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡಿಕೊಳ್ಳಲು ಭೂಮಾಪನ ಇಲಾಖೆಯ ನಕ್ಷೆ ಮತ್ತು ಹದ್ದುಬಸ್ತು ಅತ್ಯಗತ್ಯ. ಪೋಡಿ, ದಾರಿ ನಕ್ಷೆಯಂತಹ ಮೂಲಭೂತ ಕೆಲಸಗಳಿಗಾಗಿ ಗ್ರಾಮೀಣ ಭಾಗದ ಜನರು ಕಚೇರಿಗೆ ಅಲೆಯುವಂತಾಗಿದೆ.</p>.<p>ಸರ್ಕಾರ ಮತ್ತು ಭೂಮಾಪಕರ ನಡುವಿನ ಸಂಘರ್ಷದಲ್ಲಿ ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ರೈತರು ಮಕ್ಕಳ ಮದುವೆ, ಮಕ್ಕಳ ಶಿಕ್ಷಣ, ತುರ್ತು ಚಿಕಿತ್ಸೆಗಾಗಿ ಜಮೀನು ಮಾರಾಟ ಮಾಡಲು ಹೋದರೆ ಹದ್ದುಬಸ್ತು ಮತ್ತು ನಕ್ಷೆ ಕಡ್ಡಾಯವಾಗಿ ಬೇಕು. ಈಗ ಸರ್ವೆ ಕೆಲಸಗಳು ನಡೆಯದ ಹಿನ್ನೆಲೆಯಲ್ಲಿ ಖರೀದಿ-ಮಾರಾಟ ಸ್ಥಗಿತಗೊಂಡಿದ್ದು ರೈತರು ಹೆಚ್ಚು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-17-420693025</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>