‘7ನೇ ತರಗತಿಯವರೆಗೂ ನಾನು ನಮ್ಮ ಊರಿನಲ್ಲಿಯೇ ಓದಿದೆ. 8ಕ್ಕೆ ಇಲ್ಲಿಗೆ ಬಂದೆ. 7ನೇ ತರಗತಿಯಲ್ಲಿ ಶಿಕ್ಷಕರಾಗಿದ್ದ ನಾಗರಾಜು ಸರ್ ಹಾಗೂ ಶಿವಕುಮಾರ ಸ್ವಾಮೀಜಿ ಅವರಿಂದ ಅನ್ನದ ಮೌಲ್ಯ ಅರಿತೆ. ನಾಗರಾಜ್ ಸರ್ ಒಮ್ಮೆ ಶ್ರವಣಬೆಳಗೊಳಕ್ಕೆ ಹೋಗಿದ್ದಾಗ ಅಲ್ಲಿಯೂ ಕೆಲವರು ಅನ್ನ ವ್ಯರ್ಥ ಮಾಡುತ್ತಿದ್ದರಂತೆ. ಅವರೂ ಇದೇ ರೀತಿ ಮಾಡಿದರಂತೆ. ಅದನ್ನು ನನಗೆ ಹೇಳಿದ್ದರು’ ಎಂದು ಶಿವು ‘ಪ್ರಜಾವಾಣಿ’ಗೆ ತಿಳಿಸಿದ.