ತುಮಕೂರು: ಬರುವ ಜನವರಿ 31ರಂದು ನಡೆಯಲಿರುವ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆಗಾಗಿ ನಾನಾ ಕಡೆಗಳಿಂದ ಭಕ್ತರು ದವಸ, ಧಾನ್ಯಗಳು ಹಾಗೂ ಅಡುಗೆ ಸಾಮಗ್ರಿಗಳನ್ನು ಮಠಕ್ಕೆ ನೀಡುತ್ತಿದ್ದಾರೆ.
ಈಗಾಗಲೇ ಮಠದ 7 ಕಡೆ ಅಡುಗೆ ತಯಾರಿ ನಡೆಯುತ್ತಿದೆ. ಸೋಮವಾರ ಮಾಜಿ ಶಾಸಕ ಬಿ.ಸುರೇಶಗೌಡ 100 ಕ್ವಿಂಟಲ್ ಅಕ್ಕಿ ನೀಡಿದರು.
ಭಕ್ತರು ಧವಸ ದಾನ್ಯಗಳನ್ನು ಲಾರಿಗಳಲ್ಲಿ ಕಳುಹಿಸಿರುವುದು
ಮಂಗಳವಾರ ಶಾಸಕ ಡಿ.ಸಿ.ಗೌರಿಶಂಕರ್ ಒಂದು ಲಾರಿ ಲೋಡ್ ಅಕ್ಕಿ ನೀಡಿದರು. ಚಿತ್ರದುರ್ಗದ ಎಪಿಎಂಸಿ ವರ್ತಕರು ಹಾಗೂ ಭಕ್ತರು 250 ಕ್ವಿಂಟಲ್ ಅಕ್ಕಿ, ಕಡಲೆಬೇಳೆ ಸಕ್ಕರೆ ನೀಡಿದರು. ಭಕ್ತರು ತಮ್ಮ ಶಕ್ತಾನುಸಾರ ದವಸ ಧಾನ್ಯಗಳನ್ನು ಮಠಕ್ಕೆ ತರುತ್ತಿದ್ದಾರೆ.
ಈಗಾಗಲೇ ಎರಡು ಲಕ್ಷ ಜಹಂಗೀರ್ ಸಿದ್ಧವಾಗಿದ್ದು, ಬೂಂದಿ, ಮಾಲ್ದಿಯನ್ನು ತಯಾರಿಸಲಾಗುತ್ತಿದೆ.