ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ರವೀಂದ್ರ, ‘ಸ್ವಾಮೀಜಿ ಆರೋಗ್ಯ ಸ್ಥಿರವಾಗಿದೆ. ಆದರೆ, ಸೋಂಕು ಇನ್ನೂ ಕಡಿಮೆ ಆಗಿಲ್ಲ. ಪ್ರೊಟೀನ್ ಅಂಶ ಕಡಿಮೆ ಇರುವುದರಿಂದ ಶ್ವಾಸಕೋಶದಲ್ಲಿ ನೀರು ಸೇರಿಕೊಳ್ಳುತ್ತಿದ್ದು, ಈ ನೀರನ್ನು ತೆಗೆಯಲಾಗುತ್ತಿದೆ. ನಾಡಿ ಮಿಡಿತ (ಪಲ್ಸ್), ರಕ್ತದೊತ್ತಡ (ಬಿ.ಪಿ) ಸಾಮಾನ್ಯವಾಗಿದೆ. ರೋಗ ನಿರೋಧಕ ಔಷಧಿಯನ್ನು ಕೊಡಲಾಗುತ್ತಿದೆ. ದ್ರವರೂಪದ ಆಹಾರ ಕೊಡುವುದನ್ನು ಮುಂದುವರಿಸಲಾಗಿದೆ’ ಎಂದು ಹೇಳಿದರು.