ಕುಟುಂಬದ ಸದಸ್ಯನಂತೆ ಇದ್ದ ಬಹುಕಾಲದ ಗೆಳೆಯ ಅಗಲಿರುವುದು ನೋವಿನ ಸಂಗತಿ. ರೈತ ಹಾಗೂ ದಲಿತ ಹೋರಾಟವನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂಬುದು ಅವರ ಆಸೆಯಾಗಿತ್ತು. ದಲಿತ ಹೋರಾಟದಲ್ಲಿ ಇದ್ದರೂ ಸಹ ರೈತ, ಕಾರ್ಮಿಕ ಹಾಗೂ ಇತರೆ ಹೋರಾಟಗಳನ್ನು ಬೆಸೆಯಬೇಕು ಎಂಬುದು ಅವರ ಆಸೆಯಾಗಿತ್ತು. ಸಂಕಷ್ಟದ ಕಾಲದಲ್ಲಿ ಸಿದ್ದಯ್ಯ ಅವರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ.