ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತುಮಕೂರು ಜಿಲ್ಲೆಗೆ ನಿರಂತರವಾಗಿ ಹೇಮಾವತಿ ನೀರು ಹರಿಸದೇ ಇದ್ದುದರಿಂದ ಕುಡಿಯುವ ನೀರಿಗೆ, ಬೆಳೆಗೆ ರೈತರು ನೀರು ಕ್ಷೇತ್ರದ ಜನರು ಪರದಾಡಿದ್ದಾರೆ. ಆ ಸಂಕಟವು ಈ ಚುನಾವಣೆ ವೇಳೆ ಆಕ್ರೋಶವಾಗಿ ಪರಿವರ್ತನೆಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಿತ್ತು. ಆದರೆ, ಈಗಿನ ಸರ್ಕಾರ ಏನೂ ಗಮನಹರಿಸಿಲ್ಲ. 70 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಸಲಾಯಿತೇ ಹೊರತು ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ಲಭಿಸಲಿಲ್ಲ’ ಎಂದು ಹೇಳಿದರು.