‘ತಂದೆ ಶಿವಕುಮಾರ್ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ. ತಾಯಿ ವಿಜಯರತ್ನ ಬಡವನಹಳ್ಳಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದಾರೆ. ತಂದೆ– ತಾಯಿ ಶಿಕ್ಷಕರಾಗಿದ್ದರೂ ನನಗೆ ಒಂದು ದಿನವೂ ಓದಲು ಒತ್ತಡ ಹೇರಲಿಲ್ಲ. ಪ್ರತಿ ದಿನ 4 ಗಂಟೆ ನಿರಂತರ ಸಭ್ಯಾಸ ಮಾಡುತ್ತಿದ್ದೆ. ಇದರೊಂದಿಗೆ ಹಳೆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ಅಭ್ಯಾಸ ಮಾಡಿದ್ದರಿಂದ ನನಗೆ ಪರೀಕ್ಷೆ ಸುಲಭ ಎನಿಸಿತು’ ಎನ್ನುವರು ಗೌರವ್.