<p><strong>ತುಮಕೂರು:</strong> ಫುಟ್ಪಾತ್ ಒತ್ತುವರಿ ತೆರವಿಗೆ ಮಹಾನಗರ ಪಾಲಿಕೆ ಟೊಂಕ ಕಟ್ಟಿ ನಿಂತಿದ್ದು, ಇದು ಬೀದಿ ಬದಿ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.</p>.<p>ನಗರದ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಜೆ.ಸಿ.ರಸ್ತೆ, ಜಯನಗರ, ಎಂ.ಜಿ.ರಸ್ತೆ, ಅಮಾನಿಕೆರೆ ಮುಂಭಾಗದ ಪಾದಚಾರಿ ರಸ್ತೆ ಆಕ್ರಮಿಸಿಕೊಂಡವರಿಗೆ ಪಾಲಿಕೆ ಅಧಿಕಾರಿಗಳು ಶಿಸ್ತಿನ ಪಾಠ ಹೇಳುತ್ತಿದ್ದಾರೆ. ಜೆಸಿಬಿ ವಾಹನದ ಮುಖಾಂತರ ಪೆಟ್ಟಿಗೆ ಅಂಗಡಿ ತೆರವುಗೊಳಿಸುತ್ತಿದ್ದಾರೆ. ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಈಗಷ್ಟೇ ಪ್ರಾರಂಭಿಸಿದ್ದು, ಮುಂದುವರಿಯಲಿದೆ ಎಂದೂ ಖಚಿತವಾಗಿ ನುಡಿಯುತ್ತಿದ್ದಾರೆ. ಆದರೆ ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಶಾಶ್ವತ ನೆಲೆ ಕಲ್ಪಿಸಲು ಈವರೆಗೂ ಸಾಧ್ಯವಾಗಿಲ್ಲ.</p>.<p>ಸ್ಮಾರ್ಟ್ ಸಿಟಿಯ ಎಲ್ಲ ಕಡೆ ಫುಟ್ಪಾತ್ ಒತ್ತುವರಿ ಸಾಮಾನ್ಯವಾಗಿದೆ. ನಗರದಲ್ಲಿಯೇ ಅತಿ ಹೆಚ್ಚು ವಹಿವಾಟು ನಡೆಯುವ ಎಂ.ಜಿ.ರಸ್ತೆ, ಮಂಡಿಪೇಟೆ ಪಾದಚಾರಿ ರಸ್ತೆಗಳು ಅತಿಕ್ರಮಣವಾಗಿವೆ. ಜೆ.ಸಿ.ರಸ್ತೆಯ ಬದಿಯಲ್ಲಿ ಹೂವು, ಹಣ್ಣು ಮಾರಾಟವೂ ಜೋರಾಗಿ ನಡೆಯುತ್ತಿದೆ. ಹತ್ತಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವವರಿಗೆ ಪಾಲಿಕೆ ಅಧಿಕಾರಿಗಳು ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡುತ್ತಿದ್ದಾರೆ. ಇದು ಅವರನ್ನು ಚಿಂತೆಗೆ ದೂಡಿದೆ.</p>.<p>ನಗರದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ತಳ್ಳುವ ಗಾಡಿ, ಪೆಟ್ಟಿಗೆ ಅಂಗಡಿಯಲ್ಲಿ ವಹಿವಾಟು ನಡೆಸುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಪಾಲಿಕೆಯಿಂದ ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ₹10 ಸಾವಿರದಿಂದ ₹25 ಸಾವಿರದ ವರೆಗೆ ಸಾಲ ನೀಡಲಾಗಿದೆ. ಈಗ ಏಕಾಏಕಿ ಫುಟ್ಪಾತ್ನಿಂದ ತೆರವುಗೊಳಿಸಿದರೆ ಸಾಲ ತೀರಿಸುವುದು, ಕುಟುಂಬ ಸಾಗಿಸುವುದು ಹೇಗೆ? ಎಂದು ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.</p>.<p>ಮಿನಿ ಮಾರುಕಟ್ಟೆ ಅವೈಜ್ಞಾನಿಕ: ಸ್ಮಾರ್ಟ್ ಸಿಟಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಗರದಲ್ಲಿ 3 ಮಿನಿ ಮಾರುಕಟ್ಟೆ (ವೆಂಡಿಂಗ್ ಜೋನ್) ನಿರ್ಮಿಸಲಾಗಿದೆ. ತರಕಾರಿ, ಹಣ್ಣು ಸೇರಿದಂತೆ ಅಗತ್ಯ ಗೃಹೋಪಯೋಗಿ ವಸ್ತುಗಳ ಮಾರಾಟಕ್ಕಾಗಿ ಧೋಬಿಘಾಟ್, ಜಯನಗರ ಮತ್ತು ಬಾಳನಕಟ್ಟೆ ಬಳಿ ಮಾರುಕಟ್ಟೆ ಇದೆ.</p>.<p>ಮೂರು ಕಡೆಗಳಲ್ಲಿ 175ಕ್ಕೂ ಹೆಚ್ಚು ಮಂದಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಾಳನಕಟ್ಟೆ ಹತ್ತಿರದ ಮಿನಿ ಮಾರುಕಟ್ಟೆಯಲ್ಲಿ ಸುಮಾರು 100ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ವ್ಯವಸ್ಥೆ ಇದೆ. ಆದರೆ ಇದುವರೆಗೂ ಇದನ್ನು ಬಳಕೆಗೆ ನೀಡಿಲ್ಲ. ಹೀಗಾಗಿ ವಾಹನ ನಿಲುಗಡೆಯ ಸ್ಥಳವಾಗಿ ಬದಲಾಗಿದೆ. ಧೋಬಿಘಾಟ್, ಜಯನಗರದ ಮಾರುಕಟ್ಟೆಯಲ್ಲಿ ಅಷ್ಟಾಗಿ ವಹಿವಾಟು ನಡೆಯುತ್ತಿಲ್ಲ.</p>.<p>‘ಮಿನಿ ಮಾರುಕಟ್ಟೆ ಅವೈಜ್ಞಾನಿಕವಾಗಿದೆ. ವಾಹನ ನಿಲುಗಡೆಗೆ ಸರಿಯಾದ ಜಾಗ ಗುರುತಿಸಿಲ್ಲ. ಜೆ.ಸಿ.ರಸ್ತೆ, ವಿನಾಯಕ ನಗರ ಮಾರುಕಟ್ಟೆಯಲ್ಲಿ ಸುಮಾರು 300 ಜನ ವ್ಯಾಪಾರಸ್ಥರು ಇದ್ದಾರೆ. ಎಲ್ಲರೂ ಹೋದರೆ ಸ್ಥಳದ ಅಭಾವ ಎದುರಾಗುತ್ತದೆ. ಮುಂದಾಲೋಚನೆ ಇಲ್ಲದೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ’ ಎಂದು ವಿನಾಯಕ ನಗರ ಮಾರುಕಟ್ಟೆಯ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು.</p>.<div><blockquote>ಅಪಘಾತ ತಪ್ಪಿಸಲು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನು ನಗರದಾದ್ಯಂತ ವಿಸ್ತರಿಸಲಾಗುವುದು.</blockquote><span class="attribution">ಬಿ.ಶುಭ ಆಯುಕ್ತರು ಮಹಾನಗರ ಪಾಲಿಕೆ</span></div>.<p>6 ಹೊಸ ಮಾರುಕಟ್ಟೆ ಬೀದಿ ಬದಿ ವ್ಯಾಪಾರಿಗಳಿಗೆ ಅನುವು ಮಾಡಿಕೊಡಲು ನಗರದ ನಾಲ್ಕು ಕಡೆಗಳಲ್ಲಿ ಹೊಸದಾಗಿ ಮಿನಿ ಮಾರುಕಟ್ಟೆ ನಿರ್ಮಿಸಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದೆ. ಬನಶಂಕರಿ ದೇವಸ್ಥಾನದ ಹತ್ತಿರ ಅಮಾನಿಕೆರೆ ಬಳಿ ಮಾರುಕಟ್ಟೆ ಪ್ರಾರಂಭಿಸಲು ಸಿದ್ಧತೆಗಳು ನಡೆದಿವೆ. ಉಳಿದ ನಾಲ್ಕು ಮಾರುಕಟ್ಟೆಗೆ ಇನ್ನೂ ಸ್ಥಳ ಅಂತಿಮಗೊಳಿಸಿಲ್ಲ. ಈಗಿರುವ ಮಾರುಕಟ್ಟೆಗಳನ್ನು ಸಮರ್ಪಕವಾಗಿ ಬಳಕೆಗೆ ನೀಡಬೇಕು ಎಂಬ ಕೂಗು ವ್ಯಾಪಕವಾಗಿರುವ ಹೊತ್ತಿನಲ್ಲಿ ಹೊಸ ಮಾರುಕಟ್ಟೆ ಆರಂಭಕ್ಕೆ ಪ್ರಯತ್ನಗಳು ನಡೆಯುತ್ತಿವೆ. </p>.<p>ಬಡವರ ಮೇಲೆ ಗದಾಪ್ರಹಾರ ಫುಟ್ಪಾತ್ ವ್ಯಾಪಾರಿಗಳಿಗೆ ಕಾನೂನು ಪ್ರಕಾರ ವ್ಯಾಪಾರ ವಲಯ ಮಾಡಬೇಕು. ಹೆಚ್ಚಿನ ಜನಸಂದಣಿ ಇರುವ ಕಡೆ ಜಾಗ ಗುರುತಿಸಬೇಕು. ಕೇವಲ ಬೀದಿ ಬದಿ ವ್ಯಾಪಾರಿಗಳಿಂದ ಮಾತ್ರ ಒತ್ತುವರಿಯಾಗಿಲ್ಲ. ಅಂಗಡಿ ಮಳಿಗೆ ಮಾಲೀಕರು ವಾಹನ ಚಾಲಕರು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಅವರಿಗೆ ನೋಟಿಸ್ ನೀಡಿ ತೆರವುಗೊಳಿಸಬೇಕು. ಬಡ ವ್ಯಾಪಾರಸ್ಥರ ಮೇಲೆ ಗದಾಪ್ರಹಾರ ಯಾಕೆ? ವಾಸೀಂ ಅಕ್ರಂ ಬೀದಿ ಬದಿ ವ್ಯಾಪಾರಿ ** ವಾಹನ ಓಡಾಟಕ್ಕೆ ಸುಲಭ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡುವುದರಿಂದ ವಾಹನಗಳ ಓಡಾಟಕ್ಕೆ ಸುಲಭವಾಗುತ್ತದೆ. ತಳ್ಳುವ ಗಾಡಿಯಲ್ಲಿ ವ್ಯಾಪಾರ ನಡೆಸುವವರಿಗೆ ಅಧಿಕಾರಿಗಳು ತೊಂದರೆ ಕೊಡಬಾರದು. ರಾತ್ರೋರಾತ್ರಿ ಪೆಟ್ಟಿಗೆ ಅಂಗಡಿಗಳನ್ನು ಆರಂಭಿಸಿದವರಿಗೆ ತಕ್ಕ ಪಾಠ ಕಲಿಸಬೇಕು. ಶ್ರೀಧರ್ ವಿನಾಯಕ ಮಾರುಕಟ್ಟೆ ** 6 ಸಾವಿರ ಜನರಿಗೆ ಪರವಾನಗಿ ಮಹಾನಗರ ಪಾಲಿಕೆಯಿಂದ 6 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಪರವಾನಗಿ ಕೊಟ್ಟಿದ್ದಾರೆ. ಅವರು ವ್ಯಾಪಾರ ನಡೆಸಲು ಸೂಕ್ತ ಜಾಗ ಮೀಸಲಿಡಬೇಕು. ನಗರದಲ್ಲಿ ಈಗ ಆರಂಭಿಸಿರುವ ಮಿನಿ ಮಾರುಕಟ್ಟೆಗಳು ತುಂಬಾ ಅವೈಜ್ಞಾನಿಕವಾಗಿವೆ. ಅಲ್ಲಿ ವ್ಯಾಪಾರ ನಡೆಸಲು ಆಗುವುದಿಲ್ಲ. ಕನಿಷ್ಠ ವಾಹನ ನಿಲುಗಡೆಗೆ ಸ್ಥಳವಿಲ್ಲ. ವಿನಾಯಕ ನಗರದ ಬಳಿ ಇರುವ ವ್ಯಾಪಾರಸ್ಥರಿಗೆ ಇಲ್ಲಿಯೇ ವ್ಯವಸ್ಥೆ ಕಲ್ಪಿಸಬೇಕು. ರವಿಕುಮಾರ್ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಫುಟ್ಪಾತ್ ಒತ್ತುವರಿ ತೆರವಿಗೆ ಮಹಾನಗರ ಪಾಲಿಕೆ ಟೊಂಕ ಕಟ್ಟಿ ನಿಂತಿದ್ದು, ಇದು ಬೀದಿ ಬದಿ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.</p>.<p>ನಗರದ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಜೆ.ಸಿ.ರಸ್ತೆ, ಜಯನಗರ, ಎಂ.ಜಿ.ರಸ್ತೆ, ಅಮಾನಿಕೆರೆ ಮುಂಭಾಗದ ಪಾದಚಾರಿ ರಸ್ತೆ ಆಕ್ರಮಿಸಿಕೊಂಡವರಿಗೆ ಪಾಲಿಕೆ ಅಧಿಕಾರಿಗಳು ಶಿಸ್ತಿನ ಪಾಠ ಹೇಳುತ್ತಿದ್ದಾರೆ. ಜೆಸಿಬಿ ವಾಹನದ ಮುಖಾಂತರ ಪೆಟ್ಟಿಗೆ ಅಂಗಡಿ ತೆರವುಗೊಳಿಸುತ್ತಿದ್ದಾರೆ. ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಈಗಷ್ಟೇ ಪ್ರಾರಂಭಿಸಿದ್ದು, ಮುಂದುವರಿಯಲಿದೆ ಎಂದೂ ಖಚಿತವಾಗಿ ನುಡಿಯುತ್ತಿದ್ದಾರೆ. ಆದರೆ ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಶಾಶ್ವತ ನೆಲೆ ಕಲ್ಪಿಸಲು ಈವರೆಗೂ ಸಾಧ್ಯವಾಗಿಲ್ಲ.</p>.<p>ಸ್ಮಾರ್ಟ್ ಸಿಟಿಯ ಎಲ್ಲ ಕಡೆ ಫುಟ್ಪಾತ್ ಒತ್ತುವರಿ ಸಾಮಾನ್ಯವಾಗಿದೆ. ನಗರದಲ್ಲಿಯೇ ಅತಿ ಹೆಚ್ಚು ವಹಿವಾಟು ನಡೆಯುವ ಎಂ.ಜಿ.ರಸ್ತೆ, ಮಂಡಿಪೇಟೆ ಪಾದಚಾರಿ ರಸ್ತೆಗಳು ಅತಿಕ್ರಮಣವಾಗಿವೆ. ಜೆ.ಸಿ.ರಸ್ತೆಯ ಬದಿಯಲ್ಲಿ ಹೂವು, ಹಣ್ಣು ಮಾರಾಟವೂ ಜೋರಾಗಿ ನಡೆಯುತ್ತಿದೆ. ಹತ್ತಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವವರಿಗೆ ಪಾಲಿಕೆ ಅಧಿಕಾರಿಗಳು ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡುತ್ತಿದ್ದಾರೆ. ಇದು ಅವರನ್ನು ಚಿಂತೆಗೆ ದೂಡಿದೆ.</p>.<p>ನಗರದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ತಳ್ಳುವ ಗಾಡಿ, ಪೆಟ್ಟಿಗೆ ಅಂಗಡಿಯಲ್ಲಿ ವಹಿವಾಟು ನಡೆಸುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಪಾಲಿಕೆಯಿಂದ ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ₹10 ಸಾವಿರದಿಂದ ₹25 ಸಾವಿರದ ವರೆಗೆ ಸಾಲ ನೀಡಲಾಗಿದೆ. ಈಗ ಏಕಾಏಕಿ ಫುಟ್ಪಾತ್ನಿಂದ ತೆರವುಗೊಳಿಸಿದರೆ ಸಾಲ ತೀರಿಸುವುದು, ಕುಟುಂಬ ಸಾಗಿಸುವುದು ಹೇಗೆ? ಎಂದು ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.</p>.<p>ಮಿನಿ ಮಾರುಕಟ್ಟೆ ಅವೈಜ್ಞಾನಿಕ: ಸ್ಮಾರ್ಟ್ ಸಿಟಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಗರದಲ್ಲಿ 3 ಮಿನಿ ಮಾರುಕಟ್ಟೆ (ವೆಂಡಿಂಗ್ ಜೋನ್) ನಿರ್ಮಿಸಲಾಗಿದೆ. ತರಕಾರಿ, ಹಣ್ಣು ಸೇರಿದಂತೆ ಅಗತ್ಯ ಗೃಹೋಪಯೋಗಿ ವಸ್ತುಗಳ ಮಾರಾಟಕ್ಕಾಗಿ ಧೋಬಿಘಾಟ್, ಜಯನಗರ ಮತ್ತು ಬಾಳನಕಟ್ಟೆ ಬಳಿ ಮಾರುಕಟ್ಟೆ ಇದೆ.</p>.<p>ಮೂರು ಕಡೆಗಳಲ್ಲಿ 175ಕ್ಕೂ ಹೆಚ್ಚು ಮಂದಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಾಳನಕಟ್ಟೆ ಹತ್ತಿರದ ಮಿನಿ ಮಾರುಕಟ್ಟೆಯಲ್ಲಿ ಸುಮಾರು 100ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ವ್ಯವಸ್ಥೆ ಇದೆ. ಆದರೆ ಇದುವರೆಗೂ ಇದನ್ನು ಬಳಕೆಗೆ ನೀಡಿಲ್ಲ. ಹೀಗಾಗಿ ವಾಹನ ನಿಲುಗಡೆಯ ಸ್ಥಳವಾಗಿ ಬದಲಾಗಿದೆ. ಧೋಬಿಘಾಟ್, ಜಯನಗರದ ಮಾರುಕಟ್ಟೆಯಲ್ಲಿ ಅಷ್ಟಾಗಿ ವಹಿವಾಟು ನಡೆಯುತ್ತಿಲ್ಲ.</p>.<p>‘ಮಿನಿ ಮಾರುಕಟ್ಟೆ ಅವೈಜ್ಞಾನಿಕವಾಗಿದೆ. ವಾಹನ ನಿಲುಗಡೆಗೆ ಸರಿಯಾದ ಜಾಗ ಗುರುತಿಸಿಲ್ಲ. ಜೆ.ಸಿ.ರಸ್ತೆ, ವಿನಾಯಕ ನಗರ ಮಾರುಕಟ್ಟೆಯಲ್ಲಿ ಸುಮಾರು 300 ಜನ ವ್ಯಾಪಾರಸ್ಥರು ಇದ್ದಾರೆ. ಎಲ್ಲರೂ ಹೋದರೆ ಸ್ಥಳದ ಅಭಾವ ಎದುರಾಗುತ್ತದೆ. ಮುಂದಾಲೋಚನೆ ಇಲ್ಲದೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ’ ಎಂದು ವಿನಾಯಕ ನಗರ ಮಾರುಕಟ್ಟೆಯ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು.</p>.<div><blockquote>ಅಪಘಾತ ತಪ್ಪಿಸಲು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನು ನಗರದಾದ್ಯಂತ ವಿಸ್ತರಿಸಲಾಗುವುದು.</blockquote><span class="attribution">ಬಿ.ಶುಭ ಆಯುಕ್ತರು ಮಹಾನಗರ ಪಾಲಿಕೆ</span></div>.<p>6 ಹೊಸ ಮಾರುಕಟ್ಟೆ ಬೀದಿ ಬದಿ ವ್ಯಾಪಾರಿಗಳಿಗೆ ಅನುವು ಮಾಡಿಕೊಡಲು ನಗರದ ನಾಲ್ಕು ಕಡೆಗಳಲ್ಲಿ ಹೊಸದಾಗಿ ಮಿನಿ ಮಾರುಕಟ್ಟೆ ನಿರ್ಮಿಸಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದೆ. ಬನಶಂಕರಿ ದೇವಸ್ಥಾನದ ಹತ್ತಿರ ಅಮಾನಿಕೆರೆ ಬಳಿ ಮಾರುಕಟ್ಟೆ ಪ್ರಾರಂಭಿಸಲು ಸಿದ್ಧತೆಗಳು ನಡೆದಿವೆ. ಉಳಿದ ನಾಲ್ಕು ಮಾರುಕಟ್ಟೆಗೆ ಇನ್ನೂ ಸ್ಥಳ ಅಂತಿಮಗೊಳಿಸಿಲ್ಲ. ಈಗಿರುವ ಮಾರುಕಟ್ಟೆಗಳನ್ನು ಸಮರ್ಪಕವಾಗಿ ಬಳಕೆಗೆ ನೀಡಬೇಕು ಎಂಬ ಕೂಗು ವ್ಯಾಪಕವಾಗಿರುವ ಹೊತ್ತಿನಲ್ಲಿ ಹೊಸ ಮಾರುಕಟ್ಟೆ ಆರಂಭಕ್ಕೆ ಪ್ರಯತ್ನಗಳು ನಡೆಯುತ್ತಿವೆ. </p>.<p>ಬಡವರ ಮೇಲೆ ಗದಾಪ್ರಹಾರ ಫುಟ್ಪಾತ್ ವ್ಯಾಪಾರಿಗಳಿಗೆ ಕಾನೂನು ಪ್ರಕಾರ ವ್ಯಾಪಾರ ವಲಯ ಮಾಡಬೇಕು. ಹೆಚ್ಚಿನ ಜನಸಂದಣಿ ಇರುವ ಕಡೆ ಜಾಗ ಗುರುತಿಸಬೇಕು. ಕೇವಲ ಬೀದಿ ಬದಿ ವ್ಯಾಪಾರಿಗಳಿಂದ ಮಾತ್ರ ಒತ್ತುವರಿಯಾಗಿಲ್ಲ. ಅಂಗಡಿ ಮಳಿಗೆ ಮಾಲೀಕರು ವಾಹನ ಚಾಲಕರು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಅವರಿಗೆ ನೋಟಿಸ್ ನೀಡಿ ತೆರವುಗೊಳಿಸಬೇಕು. ಬಡ ವ್ಯಾಪಾರಸ್ಥರ ಮೇಲೆ ಗದಾಪ್ರಹಾರ ಯಾಕೆ? ವಾಸೀಂ ಅಕ್ರಂ ಬೀದಿ ಬದಿ ವ್ಯಾಪಾರಿ ** ವಾಹನ ಓಡಾಟಕ್ಕೆ ಸುಲಭ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡುವುದರಿಂದ ವಾಹನಗಳ ಓಡಾಟಕ್ಕೆ ಸುಲಭವಾಗುತ್ತದೆ. ತಳ್ಳುವ ಗಾಡಿಯಲ್ಲಿ ವ್ಯಾಪಾರ ನಡೆಸುವವರಿಗೆ ಅಧಿಕಾರಿಗಳು ತೊಂದರೆ ಕೊಡಬಾರದು. ರಾತ್ರೋರಾತ್ರಿ ಪೆಟ್ಟಿಗೆ ಅಂಗಡಿಗಳನ್ನು ಆರಂಭಿಸಿದವರಿಗೆ ತಕ್ಕ ಪಾಠ ಕಲಿಸಬೇಕು. ಶ್ರೀಧರ್ ವಿನಾಯಕ ಮಾರುಕಟ್ಟೆ ** 6 ಸಾವಿರ ಜನರಿಗೆ ಪರವಾನಗಿ ಮಹಾನಗರ ಪಾಲಿಕೆಯಿಂದ 6 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಪರವಾನಗಿ ಕೊಟ್ಟಿದ್ದಾರೆ. ಅವರು ವ್ಯಾಪಾರ ನಡೆಸಲು ಸೂಕ್ತ ಜಾಗ ಮೀಸಲಿಡಬೇಕು. ನಗರದಲ್ಲಿ ಈಗ ಆರಂಭಿಸಿರುವ ಮಿನಿ ಮಾರುಕಟ್ಟೆಗಳು ತುಂಬಾ ಅವೈಜ್ಞಾನಿಕವಾಗಿವೆ. ಅಲ್ಲಿ ವ್ಯಾಪಾರ ನಡೆಸಲು ಆಗುವುದಿಲ್ಲ. ಕನಿಷ್ಠ ವಾಹನ ನಿಲುಗಡೆಗೆ ಸ್ಥಳವಿಲ್ಲ. ವಿನಾಯಕ ನಗರದ ಬಳಿ ಇರುವ ವ್ಯಾಪಾರಸ್ಥರಿಗೆ ಇಲ್ಲಿಯೇ ವ್ಯವಸ್ಥೆ ಕಲ್ಪಿಸಬೇಕು. ರವಿಕುಮಾರ್ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>