ತುಮಕೂರು:ಜಿಎಸ್ಟಿ ಒಂದು ಏಕರೂಪ ತೆರಿಗೆಯಾಗಿದ್ದು, ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಚಂದನ ವಾಹಿನಿಯ ನಿರೂಪಕ ಎಚ್.ಆರ್.ಪ್ರಭಾಕರ್ ತಿಳಿಸಿದರು.
ನಗರದ ಅನನ್ಯ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಜಿಎಸ್ಟಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಎಸ್ಟಿಯಿಂದ ಪ್ರಸ್ತುತ ಭಾರತದ ಆರ್ಥಿಕತೆಗೆ ಆಗುತ್ತಿರುವ ಲಾಭಗಳು, ವಾಣಿಜ್ಯ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿ, ಇಂಡಿಯಾ ಡಿಜಿಟಲೈಷನ್ ಕುರಿತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಸಂಸ್ಥೆಯ ಟ್ರಸ್ಟಿ ಎಚ್.ಹರೀಶ್, ಪ್ರಾಂಶುಪಾಲ ಎಂ.ವಿಶ್ವಾಸ್, ಅಧ್ಯಾಪಕರಾದ ಗಣೇಶ್ಪ್ರಸಾದ್, ದೇವಕಿ ಪ್ರಸಾದ್, ಕಾಂತರಾಜು, ಯಶ್ವಸಿನಿ ಇದ್ದರು.