ಪಟ್ಟಣದ ಗೌರಿನಿಲಯ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ವರ್ಷಿತಾ ಬುಧವಾರ ಸಂಜೆ ವಿದ್ಯಾಗಮ ತರಗತಿ ಮುಗಿಸಿಕೊಂಡು ತನ್ನ ತಂದೆ ಗೋಪಾಲಕೃಷ್ಣ ಅವರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಳು. ತುಮಕೂರು ಕಡೆಯಿಂದ ಬಂದ ಮತ್ತೊಂದು ಬೈಕ್ ಮತ್ತು ವರ್ಷಿತಾಳ ತಂದೆ ಚಲಾಯಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.