ತುಮಕೂರು: ನಗರ ಹೊರವಲಯದ ಶೆಟ್ಟಿಹಳ್ಳಿ ಕೆರೆಯಲ್ಲಿ ಸಿದ್ಧಗಂಗಾಮಠದ ವಿದ್ಯಾರ್ಥಿ ಮಂಜುನಾಥ್ (16) ಶವ ಅನುಮಾನಾಸ್ಪದ ರೀತಿಯಲ್ಲಿ ಭಾನುವಾರ ಪತ್ತೆ ಆಗಿದೆ.
ಮಂಜುನಾಥ್ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರದ ಈರಮ್ಮ ಮತ್ತು ಗೋವಿಂದಯ್ಯ ದಂಪತಿ ಪುತ್ರ. ಸಾವಿನ ಕುರಿತು ತನಿಖೆ ನಡೆಸಲಾಗುತ್ತಿದೆ. ಪೋಷಕರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.