ಮರುಗಿದ ಪೊಲೀಸರು: ಧ್ರುವ ಈ ಹಿಂದೆ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವಾಗಲೂ ಶಾಲಾಹಂತದ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಬೇಸತ್ತು ಬೆಂಗಳೂರಿನಿಂದ ಮನೆಬಿಟ್ಟು ಬಂದು ಪಟ್ಟಣದ ಬೇಕರಿಯೊಂದರಲ್ಲಿ ಕೆಲಸ ಕೇಳುತ್ತಿದ್ದ. ಆಗ ಬೇಕರಿ ಮಾಲೀಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಪೊಲೀಸರು ಪೋಷಕ ನಾಗರಾಜು ಅವರನ್ನು ಸಂಪರ್ಕಿಸಿದ್ದರು. ಧ್ರುವನಿಗೆ ಬುದ್ದಿವಾದ ಹೇಳಿದ್ದರು.