ಗ್ರಾಮದ ಗೋವಿಂದರಾಜು (40) ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯವರನ್ನು ಹೆದರಿಸಿದ್ದಾರೆ. ಈತನ ವರ್ತನೆಯಿಂದ ಹೆದರಿದ ಮನೆಯವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ಗೋವಿಂದರಾಜು ಕೊಠಡಿಯೊಳಗೆ ಸೇರಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆತನನ್ನು ರಕ್ಷಿಸಲು ಪೊಲೀಸರು ಮುಂದಾದರು ಗೋವಿಂದರಾಜು ಜೀವಂತವಾಗಿ ಉಳಿಯಲಿಲ್ಲ.