ಬೆಳಿಗ್ಗೆ ಪೂಜೆ, ಉಪಾಹಾರ ಮುಗಿಸಿದರು. ಹಣ್ಣಿನ ರಸ ಸೇವಿಸಿ ಮತ್ತೆ ವಿಶ್ರಾಂತಿ ಪಡೆದರು. ಭಕ್ತರಿಗೆ ದರ್ಶನ ನೀಡುವ ಮಂಚದ ಬಳಿ ತೆರಳೋಣ ಎಂದು ಸ್ವಾಮೀಜಿ ಸಹಾಯಕರಿಗೆ ಸೂಚಿಸಿದರು. ಆಗ ‘ಎರಡು ದಿನ ಬಿಟ್ಟು ಹೋಗೋಣ’ ಎಂದಿದ್ದಕ್ಕೆ ಸಮ್ಮತಿ ವ್ಯಕ್ತಪಡಿಸಿದರು. ತ್ರಿಕಾಲ ಇಷ್ಟಲಿಂಗ ಪೂಜೆಯನ್ನು ಮುಂದುವರಿಸಿದ್ದಾರೆ.