11 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆಯಾದರು. ಮಠಕ್ಕೆ ಬಂದ ಅವರನ್ನು ನಿಧಾನವಾಗಿ ಕಾರಿನಿಂದ ಇಳಿಸಲಾಯಿತು. ಸಹಾಯಕರು ಹಾಗೂ ಸ್ವಾಮೀಜಿ ಅವರ ನೆರವಿನಲ್ಲಿ ನಿಧಾನವಾಗಿ ಹಳೇ ಮಠದತ್ತ ಬಂದರು. ಸ್ವಾಮೀಜಿ ಅವರು ಮಠಕ್ಕೆ ಬರುವುದನ್ನು ತಿಳಿದ ಭಕ್ತರು ಅವರ ಬರುವಿಕೆಗಾಗಿ ಕಾಯುತ್ತಿದ್ದರು. ಆರೋಗ್ಯದ ದೃಷ್ಟಿ ಮತ್ತು ವಿಶ್ರಾಂತಿ ಪಡೆಯಬೇಕಾದ ಕಾರಣ ಒಂದು ವಾರ ಸ್ವಾಮೀಜಿ ಅವರ ದರ್ಶನ ಭಾಗ್ಯ ಭಕ್ತರಿಗೆ ಇರುವುದಿಲ್ಲ.