‘ಸ್ವಾಮೀಜಿ ಅವರಿಗಾಗಿಯೇ ವಿಶೇಷ ವಾರ್ಡ್ ರೂಪಿಸಿದ್ದು, ತೀವ್ರ ನಿಗಾ ಘಟಕದಲ್ಲಿರುವಂತೆಯೇ ವೈದ್ಯಕೀಯ ಸುರಕ್ಷಾ ಕ್ರಮ ವ್ಯವಸ್ಥೆ ಇದೆ. ಸೋಂಕು ತಗಲುವ ಕಾರಣದಿಂದ ವಿಶೇಷ ವಾರ್ಡಿಗೂ ಭಕ್ತರು ಭೇಟಿ ಮಾಡುವುದಕ್ಕೆ ನಿರ್ಬಂಧಿಸಲಾಗಿದೆ’ ಎಂದು ಸ್ವಾಮೀಜಿ ಅವರ ಚಿಕಿತ್ಸಾ ಉಸ್ತುವಾರಿಯಲ್ಲಿರುವ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.