ತುಮಕೂರು: ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯವನ್ನು ಶನಿವಾರ ರಾತ್ರಿ ಬೆಂಗಳೂರು ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರಾದ ಡಾ.ರವೀಂದ್ರ ತಪಾಸಣೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಶಸ್ತ್ರಚಿಕಿತ್ಸೆ ಗಾಯ ವಾಸಿಯಾಗಿದೆ. ಸ್ವಾಮೀಜಿಯವರಿಗೆ ದ್ರವರೂಪ ಆಹಾರ ಕೊಡಲಾಗುತ್ತಿದೆ. ಸ್ವಲ್ಪ ಕೆಮ್ಮು ಮತ್ತು ಕಫ ಇತ್ತು.ಚಿಕಿತ್ಸೆ ನೀಡಲಾಗಿದೆ' ಎಂದರು.
‘ಈ ರೀತಿ ಶಸ್ತ್ರಚಿಕಿತ್ಸೆ ಆದಾಗ ಒಂದುವರೆ ತಿಂಗಳು ವಿಶ್ರಾಂತಿಯ ಅಗತ್ಯತೆ ಇದೆ. ಮಠದಲ್ಲಿಯೇ ಆಸ್ಪತ್ರೆಯ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಹೆಚ್ಚಿನ ನಿಗಾವಹಿಸಲಾಗಿದೆ. ಆಸ್ಪತ್ರೆಗೆ ಸ್ಥಳಾಂತರ ಮಾಡುವ ಅಗತ್ಯತೆ ಇಲ್ಲ’ ಎಂದು ಹೇಳಿದರು.