ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಇವರು ಓದಿನಲ್ಲಿ ಚುರುಕಾದ ಮಕ್ಕಳನ್ನು ಗುರುತಿಸಿ ಬಹುಮಾನದ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಎಲ್ಲ ಮಕ್ಕಳಲ್ಲಿ ಸಮನಾಗಿ ಶಿಕ್ಷಣ ಗುಣಮಟ್ಟ ತರಲು ವಿಶೇಷ ಕಾಳಜಿ ವಹಿಸಿದ್ದರು. ಇವರು ವರ್ಗಾಗೊಂಡ ವಿಷಯ ತಿಳಿದ ಕೂಡಲೇ ಮಕ್ಕಳ ಕಣ್ಣು ತೇವ ಮಾಡಿಕೊಂಡರು. ಸದ್ಯ ಇವರು ಪಕ್ಕದ ಚೌಡೇನಹಳ್ಳಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.