ಸಾಮಾನ್ಯವಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಆರ್ದ್ರಾ, ಪುನರ್ವಸು, ಪುಷ್ಯಾ ಮಳೆಯ ಸಮಯ ರಾಗಿ ಬಿತ್ತನೆಗೆ ಪೂರಕ. ಈಗಾಗಲೇ ಆರ್ದ್ರಾ, ಪುನರ್ವಸು ಮಳೆಗಳ ಸಮಯ ಮಗಿದು ಹೋಗಿದ್ದು ಪುಷ್ಯಾ ಮಳೆ ಇನ್ನು ಕಲ ದಿನ ಮಾತ್ರ ಬಾಕಿ ಉಳಿದಿದೆ. ಆರ್ದ್ರಾ ಮಳೆಯ ಕೊನೆ ದಿನಗಳಿಂದ ಇಲ್ಲಿಯವರೆಗೂ ಸೋನೆ ಮಳೆಯ ಸಿಂಚನ ತಾಲ್ಲೂಕು ವ್ಯಾಪ್ತಿಯ ಅಲ್ಲಲ್ಲಿ ಆಗುತ್ತಿದ್ದರೂ ಬಿತ್ತನೆಗೆ ಬಿಡುವು ಮಾಡಿ ಕೊಡದಿರುವುದು ರೈತರನ್ನು ಅತಂಕಕ್ಕೆ ದೂಡಿದೆ.