ಎಲ್ಲೆಡೆ ಹಿಂಸಾತ್ಮಕ ಚಟುವಟಿಕೆಗಳನ್ನು ನೋಡುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಶಾಂತಿ ಸ್ಥಾಪಿಸಲು ಸತ್ಯಾಗ್ರಹ ಎಂಬ ಪ್ರಮೇಯ ಹಿಡಿದು ಹೊರಟಿದ್ದರು. ಅದೇ ರೀತಿ ದಲೈಲಾಮಾ ಅವರು ಶಾಂತಿ ಬಾವುಟ ಹಿಡಿದಿದ್ದಾರೆ. ‘ಕಾರುಣ್ಯ’ದ ಮೂಲಕ ಸಮಾಜದಲ್ಲಿ ಶಾಂತಿ ಮೂಡಿಸಿದ್ದಾರೆ. ಈ ಕಾರುಣ್ಯದಲ್ಲಿ ಪ್ರೀತಿ, ಶಾಂತಿ, ಮಾನವೀಯತೆ– ಎಲ್ಲವನ್ನೂ ಒಳಗೊಂಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮನುಷ್ಯನಿಗೆ ಕಾರುಣ್ಯ ಸ್ಥಿತಿ ಮೂಡಬೇಕಿದೆ ಎಂದು
ಹೇಳಿದರು.