ಮಾಹಿತಿ ಇಲ್ಲದೆ ದೇಗುಲಕ್ಕೆ ಬಂದ ಭಕ್ತರು ಮುಖ್ಯದ್ವಾರ ಬಾಗಿಲು ಹಾಕಿರುವುದನ್ನು ನೋಡಿ ಅಲ್ಲೆ ಕೈ ಮುಗಿದು ಹಿಂದಿರುಗಿದರು. ಪ್ರತಿ ವರ್ಷ ಹಬ್ಬದ ದಿನ ರಾಜ್ಯದ ಮೂಲೆ, ಮೂಲೆಗಳಿಂದ ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದರು. ಇದಕ್ಕಾಗಿ ದೇಗುಲ ಆಡಳಿತ ಮಂಡಳಿ ತಿಂಗಳ ಮೊದಲೇ ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿತ್ತು. ವಿಶೇಷ ಪೂಜೆಗಳು ನಡೆಯುತ್ತಿದ್ದವು. ಗೊರವನಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಂದ ಆರತಿ ಉತ್ಸವ ನಡೆಯುತ್ತಿತ್ತು.