ಪ್ರೋತ್ಸಾಹ ಧನ ಸಿಗಲಿ
ದಾಳಿಂಬೆಯಿಂದ ಹೆಚ್ಚು ಲಾಭ ಗಳಿಸಬಹುದೆಂಬ ನಿರೀಕ್ಷೆ ಬೇಡ. ಕೆಲ ಸಂದರ್ಭದಲ್ಲಿ ಲಾಭ ಬರಬಹುದು. ಆದರೆ, ಅನೇಕ ಬಾರಿ ಹಾಕಿದ ಬಂಡವಾಳ ವಾಪಸ್ ಬರುವುದು ಕಷ್ಟ. ಆದ್ದರಿಂದ ಈ ಬೆಳೆ ಆರ್ಥಿಕವಾಗಿ ಸದೃಢರಾಗಿರುವ ರೈತರಿಗೆ ಹೆಚ್ಚು ಸೂಕ್ತ. ಸರ್ಕಾರ ದಾಳಿಂಬೆ ಬೆಳೆಗಾರರಿಗೆ ಪ್ರೋತ್ಸಾಹ ಹಣ ನೀಡಿದರೆ ಆಗ ಸಾಮಾನ್ಯ ರೈತರು ಕೂಡ ದಾಳಿಂಬೆ ಬೆಳೆಯಲು ಧೈರ್ಯವಾಗಿ ಮುಂದೆ ಬರುತ್ತಾರೆ.
–ಕೆ.ಶಿವಣ್ಣ, ದಾಳಿಂಬೆ ಬೆಳೆಗಾರ, ಬೇಡತ್ತೂರು