ಪಾವಗಡ: ತಾಲ್ಲೂಕಿನ ಮದ್ದಿಬಂಡೆ ಗ್ರಾಮದಲ್ಲಿ ಭಾನುವಾರ ರಾತ್ರಿ ಕರಡಿಗಳು ಸರ್ಕಾರಿ ಶಾಲೆ ಬಾಗಿಲು ಮುರಿದು ಸಾಮಗ್ರಿಗಳನ್ನು ಹಾಳು ಮಾಡಿವೆ.
ಗ್ರಾಮದ ಚಾಮುಂಡೇಶ್ವರಿ ದೇಗುಲದ ಬಳಿ ಎರಡು ಕರಡಿಗಳು ಅಲ್ಲಿದ್ದ ಕೆಲ ಸಾಮಗ್ರಿಗಳನ್ನು ನಾಶಪಡಿಸಿವೆ. ನಂತರ ಗ್ರಾಮದ ಸರ್ಕಾರಿ ಶಾಲೆಯ ಬಾಗಿಲು ಮುರಿದು ಒಳನುಗ್ಗಿವೆ. ಶಾಲೆಯಲ್ಲಿದ್ದ ಸಾಮಗ್ರಿಗಳನ್ನು ಹಾಳು ಮಾಡಿ ಬೆಳಗಿನ ಜಾವ ಸ್ಥಳದಿಂದ ನಿರ್ಗಮಿಸಿವೆ.
ಸಂಜೆಯಾದರೆ ಜಮೀನಿಗೆ ಹೋಗಲು ಭಯಪಡಬೇಕಿದೆ. ಹೊರವಲಯದ ಮನೆಗಳ ಜನತೆ ರಾತ್ರಿ ಮನೆಯಿಂದ ಹೊರಬರಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.