ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ಮನೆ ಕಳವು

Last Updated 25 ಆಗಸ್ಟ್ 2020, 16:46 IST
ಅಕ್ಷರ ಗಾತ್ರ

ತುಮಕೂರು: ಹಾಡಹಗಲೇ ಕ್ಯಾತ್ಸಂದ್ರ ಸಮೀಪದ ಜಿ.ಎನ್.ಮುರಳಿ ಎಂಬುವರ ಮನೆಯ ಬೀಗ ಒಡೆದಿರುವ ಕಳ್ಳರು, ಮನೆಯಲ್ಲಿದ್ದ ಅಂಚೆ ಕಚೇರಿಯ 2 ಪಾಸ್‌ ಪುಸ್ತಕಗಳು ಹಾಗೂ ₹85 ಸಾವಿರ ಮೌಲ್ಯದ ಹಣ, ಆಭರಣ ಕದ್ದೊಯ್ದಿದ್ದಾರೆ.

ಸೋಮವಾರ ಮಧ್ಯಾಹ್ನ 3.45ರ ಹೊತ್ತಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ. ಮನೆಯವರು ಹಿಂದಿರುಗಿದಾಗ ಬೀಗ ಮುರಿದು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಲಾಕರ್‌ನಲ್ಲಿದ್ದ ₹50 ಸಾವಿರ ನಗದು, ಪೂಜೆಗೆ ಇಟ್ಟಿದ್ದ ₹5 ಸಾವಿರ, 7.5 ಗ್ರಾಂ ತೂಕದ ಬಂಗಾರದ ಓಲೆ ಜುಮುಕಿ, 4 ಗ್ರಾಂ ತೂಕದ
ಉಂಗುರ, 2.5 ಗ್ರಾಂ ತೂಕದ ಬಂಗಾರದ ಗುಂಡು ಸೇರಿ ₹85
ಸಾವಿರ ಮೌಲ್ಯದ ವಸ್ತುಗಳು ಕಳುವಾಗಿರುವ ಬಗ್ಗೆ ಮುರಳಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT