ತುಮಕೂರು: ಹಾಡಹಗಲೇ ಕ್ಯಾತ್ಸಂದ್ರ ಸಮೀಪದ ಜಿ.ಎನ್.ಮುರಳಿ ಎಂಬುವರ ಮನೆಯ ಬೀಗ ಒಡೆದಿರುವ ಕಳ್ಳರು, ಮನೆಯಲ್ಲಿದ್ದ ಅಂಚೆ ಕಚೇರಿಯ 2 ಪಾಸ್ ಪುಸ್ತಕಗಳು ಹಾಗೂ ₹85 ಸಾವಿರ ಮೌಲ್ಯದ ಹಣ, ಆಭರಣ ಕದ್ದೊಯ್ದಿದ್ದಾರೆ.
ಸೋಮವಾರ ಮಧ್ಯಾಹ್ನ 3.45ರ ಹೊತ್ತಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ. ಮನೆಯವರು ಹಿಂದಿರುಗಿದಾಗ ಬೀಗ ಮುರಿದು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಲಾಕರ್ನಲ್ಲಿದ್ದ ₹50 ಸಾವಿರ ನಗದು, ಪೂಜೆಗೆ ಇಟ್ಟಿದ್ದ ₹5 ಸಾವಿರ, 7.5 ಗ್ರಾಂ ತೂಕದ ಬಂಗಾರದ ಓಲೆ ಜುಮುಕಿ, 4 ಗ್ರಾಂ ತೂಕದ ಉಂಗುರ, 2.5 ಗ್ರಾಂ ತೂಕದ ಬಂಗಾರದ ಗುಂಡು ಸೇರಿ ₹85 ಸಾವಿರ ಮೌಲ್ಯದ ವಸ್ತುಗಳು ಕಳುವಾಗಿರುವ ಬಗ್ಗೆ ಮುರಳಿ ದೂರು ದಾಖಲಿಸಿದ್ದಾರೆ.