ಬುಧವಾರ ರಾತ್ರಿ 25 ಮಂದಿ ಸವರ್ಣೀಯರ ಗುಂಪು ಕಾಲೊನಿಗೆ ನುಗ್ಗಿ, ವ್ಯಾಪಾರಕ್ಕೆ ಹೋಗದಂತೆ ಎಚ್ಚರಿಕೆ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಕಾಲೊನಿ ಸಂಪರ್ಕ ರಸ್ತೆಗೆ ಮುಳ್ಳಿನ ಬೇಲೆ ಹಾಕಿದ್ದು, ಗ್ರಾಮದಿಂದ ಬಹಿಷ್ಕರಿಸುವ ಬೆದರಿಕೆ ಹಾಕಿದೆ. ಅದನ್ನು ಪ್ರಶ್ನಿಸಿ ಬೇಲಿ ಕೀಳಲು ಮುಂದಾದವರ ಮೇಲೆ ಹಲ್ಲೆ ಮಾಡಲಾಗಿದೆ.