ತುಮಕೂರು: ಸೈಕಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಂದ ಹಲ್ಲೆಗೆ ಒಳಗಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಜಯನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಓಂಕಾರೇಶ್ವರ, ಕಾನ್ಸ್ಟೇಬಲ್ಗಳಾದ ರಾಜು, ಮಂಜಪ್ಪ ಮಸಾಲವಾರ ಅಮಾನತುಗೊಂಡವರು. ಸೈಕಲ್ ಕಳ್ಳತನ ಆರೋಪದ ಮೇಲೆ ಠಾಣೆಗೆ ಕರೆತಂದಿದ್ದ ಹನುಮಂತರಾಯಪ್ಪ (58) ಮೇಲೆ ಪೊಲೀಸರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಕಳೆದ ಶನಿವಾರ, ಭಾನುವಾರ ಆರೋಪಿಯನ್ನು ವಿಚಾರಣೆಗಾಗಿ ಜಯನಗರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಭಾನುವಾರ ವಿಚಾರಣೆ ಮುಗಿಸಿ ವಾಪಸ್ ಕರೆತಂದು ಬಿಟ್ಟ ನಂತರ ಸಾವನ್ನಪ್ಪಿದ್ದರು.