ತುಮಕೂರು: ತುರುವೇಕೆರೆ ತಾಲ್ಲೂಕು ಮಣೆಚೆಂಡೂರು ಸಮೀಪ ಏತ ನೀರಾವರಿ ಯೋಜನೆಯಡಿ ನಿರ್ಮಿಸಿದ ಚೆಕ್ ಡ್ಯಾಂ ಹಿನ್ನೀರಿನಲ್ಲಿ ಈಜಾಡುವಾಗ ಹೂಳಿನಲ್ಲಿ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ.
ಮಣೆಚೆಂಡೂರು ಗ್ರಾಮದ ನವೀನ್, ಮಂಜು ಹಾಗೂ ಚನ್ನರಾಯಪಟ್ಟಣ ಸಮೀಪದ ಮಗ್ಗೆಹಳ್ಳಿಯ ವೇದ ಮೃತಪಟ್ಟವರು. ಎಲ್ಲರೂ 18ರಿಂದ 20 ವರ್ಷದೊಳಗಿನವರು.
ಭಾನುವಾರ ರಜೆ ಇದ್ದಿದರಿಂದ ಈಜಾಡಲು ಹೋಗಿದ್ದರು. ಈಜಾಡುತ್ತಿದ್ದಾಗ ಹೂಳಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ತುರುವೇಕೆರೆ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.