ತುಮಕೂರು: ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಬೂದನಹಳ್ಳಿ ಗ್ರಾಮದ ಬಳಿ ಸಿಡಿಲು ಬಡಿದು ಲಕ್ಕಮ್ಮ (65) ಎಂಬುವರು ಗುರುವಾರ ಸಂಜೆ ಮೃತ ಪಟ್ಟಿದ್ದಾರೆ.
ದನ ಮೇಯಿಸಲು ಹೋಗಿದ್ದ ಲಕ್ಕಮ್ಮ, ಮಳೆ ಬಂದ ಕಾರಣ ಹುಣಿಸೆಮರದ ಕೆಳಗೆ ಆಶ್ರಯ ಪಡೆದಿದ್ದರು. ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಲಿಯೂರುದುರ್ಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಕ್ಕಮ್ಮಗೆ ಮಗಳು, ಮೊಮ್ಮಗಳು ಇದ್ದಾರೆ.
ಶಾಸಕ ರಂಗನಾಥ್, ತಹಶೀಲ್ದಾರ್ ಮಹಾಬಲೇಶ್ವರ ಮೃತ ಲಕ್ಕಮ್ಮ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.