<p>ತಿಪಟೂರು: ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಪರವಾನಗಿ ಪಡೆದ ಭೂಮಾಪಕರು ನಡೆಸುತ್ತಿರುವ ಮುಷ್ಕರದಿಂದ ಭೂಮಾಪನ ಇಲಾಖೆಗೆ ಸಂಬಂಧಿಸಿದ ರೈತರ, ಸಾರ್ವಜನಿಕರ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ.</p>.<p>ರೈತರ ಜಮೀನು ವ್ಯವಹಾರ, ನಿವೇಶನ ಖರೀದಿ, ಹಕ್ಕು ಬದಲಾವಣೆ, ಖಾತೆ ಬದಲಾವಣೆ ಹಾಗೂ ಸಾಲ ಸೌಲಭ್ಯಗಳ ಪ್ರಕ್ರಿಯೆಗಳು ಅಸ್ತವ್ಯಸ್ತಗೊಂಡಿದ್ದು, ರೈತರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ 1,872 ಹದ್ದುಬಸ್ತು ಅರ್ಜಿಗಳು ಹಾಗೂ ಸುಮಾರು 1,500 ದರಕಾಸ್ತು ಅರ್ಜಿಗಳು, 300 ಇತರೆ ಅರ್ಜಿಗಳು ಬಾಕಿ ಉಳಿದಿವೆ. ಈ ಅರ್ಜಿಗಳನ್ನು ವಿಲೇವಾರಿ ಮಾಡಲು ಕೇವಲ ಇಬ್ಬರು ಭೂಮಾಪಕರನ್ನು ಮಾತ್ರ ನಿಯೋಜಿಸಿರುವುದು ರೈತರಿಗೆ ಸಂಕಷ್ಟ ಬಂದಿದೆ.</p>.<p>2 ಮಹಿಳೆಯರು ಮತ್ತು 21 ಪುರುಷರು ಸೇರಿದಂತೆ ಪರವಾನಗಿ ಪಡೆದ 23 ಭೂಮಾಪಕರು ಕಾರ್ಯ ನಿರ್ವಹಿಸುತ್ತಿದ್ದು, ಸೇವಾ ಭದ್ರತೆಗಾಗಿ ಮುಷ್ಕರ ಕೈಗೊಂಡಿರುವುದು ಅರ್ಜಿಗಳ ವಿಲೇವಾರಿಗೆ ತೊಂದರೆಯಾಗಿದೆ.</p>.<p>ತಾಲ್ಲೂಕಿನಲ್ಲಿ ಒಟ್ಟು 20 ಸರ್ಕಾರಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 8 ಮಂದಿ ಕಚೇರಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದ 12 ಮಂದಿ ವಿವಿಧ ಕ್ಷೇತ್ರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಾದ ಆಕಾರ್ಬಂದ್ ಗಣೀಕೃತ ಕಾರ್ಯಕ್ಕೆ 4 ಮಂದಿ, ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆ (ಡ್ರೋನ್ ಸರ್ವೆ), ಇಬ್ಬರು, ಚೌಡ್ಲಾಪುರ ಅರಣ್ಯ ಪ್ರದೇಶದ ಸರ್ವೆ ಕಾರ್ಯಕ್ಕೆ ಇಬ್ಬರು, ದರಖಾಸ್ತು ಪೋಡಿ ಕಾರ್ಯಕ್ಕೆ ಇಬ್ಬರನ್ನು ನಿಯೋಜನೆ ಮಾಡಲಾಗಿದೆ. 1,872 ಅರ್ಜಿಗಳನ್ನು ವಿಲೇವಾರಿ ಮಾಡಲು ಇಬ್ಬರು ಭೂಮಾಪಕರನ್ನು ನಿಯೋಜಿಸಲಾಗಿದೆ.</p>.<p>ಸರ್ಕಾರದ ಮಾರ್ಗಸೂಚಿಯಂತೆ ಒಬ್ಬ ಭೂಮಾಪಕರು ತಿಂಗಳಿಗೆ ಸರಾಸರಿ 23 ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗಿದೆ. ಇಬ್ಬರು ಸೇರಿ ತಿಂಗಳಿಗೆ ಕೇವಲ 46 ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯ. ಈ ವೇಗದಲ್ಲಿ ಎಲ್ಲ ಅರ್ಜಿಗಳನ್ನು ಪೂರ್ಣಗೊಳಿಸಲು ಕನಿಷ್ಠ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುವ ಸಾಧ್ಯತೆಯಿದ್ದು ಇದಕ್ಕೆ ಹೆಚ್ಚುವರಿಯಾಗಿ, ಪ್ರತಿದಿನವೂ ಹೊಸ ಅರ್ಜಿಗಳು ನಾಡಕಚೇರಿಯಲ್ಲಿ ದಾಖಲಾಗುತ್ತಿದ್ದು, ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ.</p>.<p>ತತ್ಕಾಲ್ ಪೋಡಿ ಪ್ರಕ್ರಿಯೆಗೆ ಸರ್ಕಾರ ಒಂದು ತಿಂಗಳ ಅವಧಿ ನಿಗದಿಪಡಿಸಿದ್ದರೂ, ಪ್ರಾಯೋಗಿಕವಾಗಿ ಕಾರ್ಯಗತಗೊಳ್ಳುವಲ್ಲಿ ಅಡಚಣೆಗಳು ಎದುರಾಗುತ್ತಿವೆ.</p>.<p>ಭೂಮಾಪಕರು ಕೆಲಸಕ್ಕೆ ಹಾಜರಾಗದ ಹಿನ್ನೆಲೆ ಭೂಮಾಪನ, ಹದ್ದುಬಸ್ತು, ಸರ್ವೆ ಹಾಗೂ ಬ್ಯಾಂಕ್ ಸಾಲ ಪಡೆಯಲು ಅಗತ್ಯವಿರುವ 11ಇ ನಕ್ಷೆ, ಮನೆ ನಿರ್ಮಾಣ, ಕ್ರಯ, ವಿಭಾಗ, ದಾನಪತ್ರ, ವಾರಸುದಾರ ಹಕ್ಕು ಹಂಚಿಕೆ, ಜಮೀನು ಖರೀದಿ-ಮಾರಾಟ ಪ್ರಕ್ರಿಯೆಗಳೂ ಸೇರಿದಂತೆ ಪ್ರಮುಖ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ.</p>.<p>ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅಗತ್ಯವಿರುವ ದಾಖಲೆಗಳ ಸಿದ್ಧತೆ ಕೂಡ ವಿಳಂಬವಾಗಿದ್ದು, ಜನರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗಿದೆ.</p>.<p>ಶುಲ್ಕದ ವಿವರಗಳ ಪ್ರಕಾರ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಕ್ಷೆ ಪಡೆಯಲು ₹800, ನಾಡಕಚೇರಿ ಮೂಲಕ 11ಇ ನಕ್ಷೆ ಪಡೆಯಲು ಮೊದಲ ಎರಡು ಎಕರೆಗೆ ₹1,500 ಹಾಗೂ ನಂತರ ಪ್ರತಿ ಎಕರೆಗೆ ₹400 ನಗರ ಪ್ರದೇಶಗಳಲ್ಲಿ ಮೊದಲ ಎರಡು ಎಕರೆಗೆ ₹2,500 ಹಾಗೂ ನಂತರ ಪ್ರತಿ ಎಕರೆಗೆ ₹400 ಶುಲ್ಕ ನಿಗದಿಯಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-17-888897423</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿಪಟೂರು: ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಪರವಾನಗಿ ಪಡೆದ ಭೂಮಾಪಕರು ನಡೆಸುತ್ತಿರುವ ಮುಷ್ಕರದಿಂದ ಭೂಮಾಪನ ಇಲಾಖೆಗೆ ಸಂಬಂಧಿಸಿದ ರೈತರ, ಸಾರ್ವಜನಿಕರ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ.</p>.<p>ರೈತರ ಜಮೀನು ವ್ಯವಹಾರ, ನಿವೇಶನ ಖರೀದಿ, ಹಕ್ಕು ಬದಲಾವಣೆ, ಖಾತೆ ಬದಲಾವಣೆ ಹಾಗೂ ಸಾಲ ಸೌಲಭ್ಯಗಳ ಪ್ರಕ್ರಿಯೆಗಳು ಅಸ್ತವ್ಯಸ್ತಗೊಂಡಿದ್ದು, ರೈತರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ 1,872 ಹದ್ದುಬಸ್ತು ಅರ್ಜಿಗಳು ಹಾಗೂ ಸುಮಾರು 1,500 ದರಕಾಸ್ತು ಅರ್ಜಿಗಳು, 300 ಇತರೆ ಅರ್ಜಿಗಳು ಬಾಕಿ ಉಳಿದಿವೆ. ಈ ಅರ್ಜಿಗಳನ್ನು ವಿಲೇವಾರಿ ಮಾಡಲು ಕೇವಲ ಇಬ್ಬರು ಭೂಮಾಪಕರನ್ನು ಮಾತ್ರ ನಿಯೋಜಿಸಿರುವುದು ರೈತರಿಗೆ ಸಂಕಷ್ಟ ಬಂದಿದೆ.</p>.<p>2 ಮಹಿಳೆಯರು ಮತ್ತು 21 ಪುರುಷರು ಸೇರಿದಂತೆ ಪರವಾನಗಿ ಪಡೆದ 23 ಭೂಮಾಪಕರು ಕಾರ್ಯ ನಿರ್ವಹಿಸುತ್ತಿದ್ದು, ಸೇವಾ ಭದ್ರತೆಗಾಗಿ ಮುಷ್ಕರ ಕೈಗೊಂಡಿರುವುದು ಅರ್ಜಿಗಳ ವಿಲೇವಾರಿಗೆ ತೊಂದರೆಯಾಗಿದೆ.</p>.<p>ತಾಲ್ಲೂಕಿನಲ್ಲಿ ಒಟ್ಟು 20 ಸರ್ಕಾರಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 8 ಮಂದಿ ಕಚೇರಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದ 12 ಮಂದಿ ವಿವಿಧ ಕ್ಷೇತ್ರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಾದ ಆಕಾರ್ಬಂದ್ ಗಣೀಕೃತ ಕಾರ್ಯಕ್ಕೆ 4 ಮಂದಿ, ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆ (ಡ್ರೋನ್ ಸರ್ವೆ), ಇಬ್ಬರು, ಚೌಡ್ಲಾಪುರ ಅರಣ್ಯ ಪ್ರದೇಶದ ಸರ್ವೆ ಕಾರ್ಯಕ್ಕೆ ಇಬ್ಬರು, ದರಖಾಸ್ತು ಪೋಡಿ ಕಾರ್ಯಕ್ಕೆ ಇಬ್ಬರನ್ನು ನಿಯೋಜನೆ ಮಾಡಲಾಗಿದೆ. 1,872 ಅರ್ಜಿಗಳನ್ನು ವಿಲೇವಾರಿ ಮಾಡಲು ಇಬ್ಬರು ಭೂಮಾಪಕರನ್ನು ನಿಯೋಜಿಸಲಾಗಿದೆ.</p>.<p>ಸರ್ಕಾರದ ಮಾರ್ಗಸೂಚಿಯಂತೆ ಒಬ್ಬ ಭೂಮಾಪಕರು ತಿಂಗಳಿಗೆ ಸರಾಸರಿ 23 ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗಿದೆ. ಇಬ್ಬರು ಸೇರಿ ತಿಂಗಳಿಗೆ ಕೇವಲ 46 ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯ. ಈ ವೇಗದಲ್ಲಿ ಎಲ್ಲ ಅರ್ಜಿಗಳನ್ನು ಪೂರ್ಣಗೊಳಿಸಲು ಕನಿಷ್ಠ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುವ ಸಾಧ್ಯತೆಯಿದ್ದು ಇದಕ್ಕೆ ಹೆಚ್ಚುವರಿಯಾಗಿ, ಪ್ರತಿದಿನವೂ ಹೊಸ ಅರ್ಜಿಗಳು ನಾಡಕಚೇರಿಯಲ್ಲಿ ದಾಖಲಾಗುತ್ತಿದ್ದು, ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ.</p>.<p>ತತ್ಕಾಲ್ ಪೋಡಿ ಪ್ರಕ್ರಿಯೆಗೆ ಸರ್ಕಾರ ಒಂದು ತಿಂಗಳ ಅವಧಿ ನಿಗದಿಪಡಿಸಿದ್ದರೂ, ಪ್ರಾಯೋಗಿಕವಾಗಿ ಕಾರ್ಯಗತಗೊಳ್ಳುವಲ್ಲಿ ಅಡಚಣೆಗಳು ಎದುರಾಗುತ್ತಿವೆ.</p>.<p>ಭೂಮಾಪಕರು ಕೆಲಸಕ್ಕೆ ಹಾಜರಾಗದ ಹಿನ್ನೆಲೆ ಭೂಮಾಪನ, ಹದ್ದುಬಸ್ತು, ಸರ್ವೆ ಹಾಗೂ ಬ್ಯಾಂಕ್ ಸಾಲ ಪಡೆಯಲು ಅಗತ್ಯವಿರುವ 11ಇ ನಕ್ಷೆ, ಮನೆ ನಿರ್ಮಾಣ, ಕ್ರಯ, ವಿಭಾಗ, ದಾನಪತ್ರ, ವಾರಸುದಾರ ಹಕ್ಕು ಹಂಚಿಕೆ, ಜಮೀನು ಖರೀದಿ-ಮಾರಾಟ ಪ್ರಕ್ರಿಯೆಗಳೂ ಸೇರಿದಂತೆ ಪ್ರಮುಖ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ.</p>.<p>ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅಗತ್ಯವಿರುವ ದಾಖಲೆಗಳ ಸಿದ್ಧತೆ ಕೂಡ ವಿಳಂಬವಾಗಿದ್ದು, ಜನರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗಿದೆ.</p>.<p>ಶುಲ್ಕದ ವಿವರಗಳ ಪ್ರಕಾರ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಕ್ಷೆ ಪಡೆಯಲು ₹800, ನಾಡಕಚೇರಿ ಮೂಲಕ 11ಇ ನಕ್ಷೆ ಪಡೆಯಲು ಮೊದಲ ಎರಡು ಎಕರೆಗೆ ₹1,500 ಹಾಗೂ ನಂತರ ಪ್ರತಿ ಎಕರೆಗೆ ₹400 ನಗರ ಪ್ರದೇಶಗಳಲ್ಲಿ ಮೊದಲ ಎರಡು ಎಕರೆಗೆ ₹2,500 ಹಾಗೂ ನಂತರ ಪ್ರತಿ ಎಕರೆಗೆ ₹400 ಶುಲ್ಕ ನಿಗದಿಯಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-17-888897423</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>