‘ಸರ್ವಜ್ಞರು ಸಮಾಜದ ಉದ್ಧಾರಕ್ಕಾಗಿ ನಾಡನ್ನು ಪರ್ಯಟನೆ ಮಾಡಿದರು. ತನ್ನ ಅನುಭವದಿಂದ ತ್ರಿಪದಿಗಳನ್ನು ರಚಿಸಿ ಕೋಟ್ಯಂತರ ಜನರಿಗೆ ದಾರಿದೀಪವಾದರು. ಇವರ ಮೂಲ ಹೆಸರು ಪುಷ್ಪದತ್ತ. ಸರ್ವಜ್ಞ ಎಂಬುದು ನಾಮಾಂಕಿತ ಮಾತ್ರ. ತೆಲುಗಿನ ಕವಿ ವೇಮನ, ತಮಿಳಿನ ತಿರುವಳ್ಳುವರ್ ಅವರಂತೆಯೇ ಕನ್ನಡದಲ್ಲಿ ಸರ್ವಜ್ಞರು ಪ್ರಸಿದ್ಧರು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನಿರ್ದೇಶಕ ಗುರುಮೂರ್ತಿ, ಕುಂಬಾರ ಸಂಘದ ಅಧ್ಯಕ್ಷ ವಿ.ರಾಮಚಂದ್ರಪ್ಪ, ಖಜಾಂಚಿ ಎಚ್ ಅನ್ನಪೂರ್ಣ, ಸದಸ್ಯರಾದ ವಸಂತ ಕುಮಾರ್, ಸದಾಶಿವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಸುರೇಶ್, ಇದ್ದರು.