ಹೈದರಾಬಾದ್: ಇಲ್ಲಿನ ರಾಮಕೃಷ್ಣ ಸ್ಟುಡಿಯೊದಲ್ಲಿ ತೆಲುಗು ಚಿತ್ರರಂಗದ ಮೇರುನಟ ಎನ್.ಟಿ.ರಾಮರಾವ್ ಅವರ ಜೀವನ ಆಧರಿಸಿದ ಚಲನಚಿತ್ರದ ಚಿತ್ರೀಕರಣಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಗುರುವಾರ ಚಾಲನೆ ನೀಡಿದರು.
‘ಎನ್ಟಿಆರ್ ಅವರ ಲವಕುಶ, ಪಾತಾಳ ಭೈರವಿ ಮತ್ತು ದೇಶೋದ್ಧಾರಕುಲು ಸೇರಿದಂತೆ ಹಲವು ಚಿತ್ರಗಳು ಮಾರ್ಚ್ 29ರಂದೇ ಬಿಡುಗಡೆಯಾಗಿದ್ದವು. ಹಾಗಾಗಿ, ಈ ಚಿತ್ರದ ಚಿತ್ರೀಕರಣಕ್ಕೂ 29ರಂದೇ ಚಾಲನೆ ನೀಡಲಾಗಿದೆ’ ಎಂದು ಎನ್ಟಿಆರ್ ಅಭಿಮಾನಿಯಾಗಿರುವ ವೆಂಕಯ್ಯ ನಾಯ್ಡು ತಿಳಿಸಿದರು.