ತುಮಕೂರು: ನಗರದ ಸಮ್ಮುತ ಥಿಯೇಟರ್ ಗುರುವಾರ (ಅ.17) ಸಂಜೆ 6.45ಕ್ಕೆ ದ್ವೀಪ ನಾಟಕ ಪ್ರದರ್ಶನ ಆಯೋಜಿಸಿದೆ.
ಈ ನಾಟಕವನ್ನು ಮಂಗಳೂರಿನ ಅಯನ ನಾಟಕ ಮನೆಯವರು ಪ್ರದರ್ಶಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಉದ್ಘಾಟನೆ ನೆರವೇರಿಸುವರು. ಅಧ್ಯಕ್ಷತೆಯನ್ನು ಮೇಯರ್ ಲಲಿತಾ ರವೀಶ್ ವಹಿಸಲಿದ್ದಾರೆ ಎಂದು ಸಂಘಟಕರಾದ ಸುನೀಲ್ ಚೇತನ್ ತಿಳಿಸಿದ್ದಾರೆ.