ತುರುವೇಕೆರೆಯ ನಿವಾಸಿಗಳಾದ ರಂಗನಾಥ್, ಶಂಕರ್ ಸಾಮಿಲ್ ಮಾಲೀಕ ಬಾಲಕೃಷ್ಣ ಕುಟುಂಬ, ಕಾಚಿಪಾಳ್ಯ ಗ್ರಾಮದ ಗುರುಪಾದೇಶ್ವರ ಕುಟುಂಬದವರು ಸೇರಿ ಒಟ್ಟು 14 ಮಂದಿ ತುರುವೇಕೆರೆಯ ಮಹೇಶ್ ಟ್ರಾವೆಲ್ ಏಜೆನ್ಸಿ ಮೂಲಕ ಅಂಡಮಾನ್ ಗೆ ಏಪ್ರಿಲ್ 29ರಂದು ಬೆಂಗಳೂರಿಂದ ತುರುವೇಕೆರೆ, ಮೈಸೂರು, ಮೂಡಬಿದರೆ, ಕೊಡಗಿನ ಪ್ರಯಾಣಕರು ಸೇರಿ ಒಟ್ಟು 47 ಮಂದಿ ಪ್ರಯಾಣ ಬೆಳೆಸಿದ್ದರು. ತುರುವೇಕೆರೆಯ 14 ಪ್ರಯಾಣಿಕರು ಮೇ 4ರಂದು ತುರುವೇಕೆರೆಗೆ ಪ್ರವಾಸದಿಂದ ಹಿಂದಿರುಗಬೇಕಿತ್ತು.