ಛತ್ತೀಸಗಡದ ಚಿಂದಿ ಗ್ರಾಮದ ಪುರುಷೋತ್ತಮ್ ಸಾಬ್ ಬಂಧಿತ. ಭಾನುವಾರ ಸಂಜೆ ಅಮ್ಮಸಂದ್ರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ರೈಲು ಹತ್ತಲು ಮುಂದಾಗಿದ್ದರು. ರೈಲು ಮೊದಲೇ ಪ್ರಯಾಣಿಕರಿಂದ ತುಂಬಿ ತುಳುಕುತಿತ್ತು. ಈ ಸನ್ನಿವೇಶವನ್ನು ಬಳಿಸಿಕೊಂಡ ಪುರುಷೋತ್ತಮ್ ರೈಲು ಹತ್ತುವ ಪ್ರಯಾಣಿಕನ ಕಿಸೆಗೆ ಕೈ ಹಾಕಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಆತನನ್ನು ಹಿಡಿದು ದಂಡಿನಶಿವರ ಪೊಲೀಸರಿಗೆ ಒಪ್ಪಿಸಿದರು.