<p>ತುಮಕೂರು: ‘ಜಗತ್ತಿಗೆ ಶಾಂತಿ ಸಾರಿದ ಬುದ್ಧನನ್ನು ಭಾರತದಿಂದ ಓಡಿಸಿದ್ದೇವೆ ಎಂದು ಕೆಲ ಕುತಂತ್ರಿಗಳು ಭ್ರಮೆಯಲ್ಲಿದ್ದಾರೆ. ಬುದ್ಧ ರಾಷ್ಟ್ರ ಬಿಟ್ಟು ಹೋಗುವುದಿಲ್ಲ. ನಮ್ಮ ಜನರ ನಾಡಿಯಲ್ಲಿದ್ದಾರೆ‘ ಎಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ರಾಜ್ ಮೌರ್ಯ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಬುದ್ಧ ದೇಶದ ತ್ರಿವರ್ಣ ಧ್ವಜದಲ್ಲಿ ದಮ್ಮ ಚಕ್ರವಾಗಿ ನಿಂತಿದ್ದಾರೆ. ಜಗತ್ತಿನ ಎಲ್ಲೆಡೆ ಬುದ್ಧನ ಆದರ್ಶಗಳು, ಅನುಯಾಯಿಗಳು ಹರಡಿದ್ದಾರೆ. ಭಾರತದ ಹೃದಯ, ಅವರನ್ನು ಸುಲಭವಾಗಿ ಓಡಿಸಲು ಸಾಧ್ಯವಿಲ್ಲ. ಬುದ್ಧ ನಮಗೆ ಬೆಳಕಾಗಬೇಕು. ಅವರ ಆದರ್ಶಗಳು ಎಂದಿಗೂ ಶಾಶ್ವತ ಎಂದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ‘ಬುದ್ಧ ಎಂದರೆ ಎಚ್ಚರ ಎಂದರ್ಥ. ಬುದ್ಧ ಅವತರಿಸುವ ಮುನ್ನವೇ ಭೂಮಿ ಮೇಲೆ ನಾಗರಿಕತೆ ಇತ್ತು. ಅವರು ಹುಟ್ಟಿದ ಮೇಲೆ ಮನುಷ್ಯತ್ವ ಬೆಳೆಯಿತು. ಪ್ರೀತಿ, ಅಂತಃಕರಣ ನೆಲೆಯೂರಿತು’ ಎಂದರು.</p>.<p>ಶಾಸಕ ಜಿ.ಬಿ.ಜ್ಯೋತಿಗಣೇಶ್, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ, ಉಪನ್ಯಾಸಕರಾದ ನರಸಿಂಹಯ್ಯ, ಶ್ರೀನಿವಾಸ್ ಇತರರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-17-2139575422</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ‘ಜಗತ್ತಿಗೆ ಶಾಂತಿ ಸಾರಿದ ಬುದ್ಧನನ್ನು ಭಾರತದಿಂದ ಓಡಿಸಿದ್ದೇವೆ ಎಂದು ಕೆಲ ಕುತಂತ್ರಿಗಳು ಭ್ರಮೆಯಲ್ಲಿದ್ದಾರೆ. ಬುದ್ಧ ರಾಷ್ಟ್ರ ಬಿಟ್ಟು ಹೋಗುವುದಿಲ್ಲ. ನಮ್ಮ ಜನರ ನಾಡಿಯಲ್ಲಿದ್ದಾರೆ‘ ಎಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ರಾಜ್ ಮೌರ್ಯ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಬುದ್ಧ ದೇಶದ ತ್ರಿವರ್ಣ ಧ್ವಜದಲ್ಲಿ ದಮ್ಮ ಚಕ್ರವಾಗಿ ನಿಂತಿದ್ದಾರೆ. ಜಗತ್ತಿನ ಎಲ್ಲೆಡೆ ಬುದ್ಧನ ಆದರ್ಶಗಳು, ಅನುಯಾಯಿಗಳು ಹರಡಿದ್ದಾರೆ. ಭಾರತದ ಹೃದಯ, ಅವರನ್ನು ಸುಲಭವಾಗಿ ಓಡಿಸಲು ಸಾಧ್ಯವಿಲ್ಲ. ಬುದ್ಧ ನಮಗೆ ಬೆಳಕಾಗಬೇಕು. ಅವರ ಆದರ್ಶಗಳು ಎಂದಿಗೂ ಶಾಶ್ವತ ಎಂದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ‘ಬುದ್ಧ ಎಂದರೆ ಎಚ್ಚರ ಎಂದರ್ಥ. ಬುದ್ಧ ಅವತರಿಸುವ ಮುನ್ನವೇ ಭೂಮಿ ಮೇಲೆ ನಾಗರಿಕತೆ ಇತ್ತು. ಅವರು ಹುಟ್ಟಿದ ಮೇಲೆ ಮನುಷ್ಯತ್ವ ಬೆಳೆಯಿತು. ಪ್ರೀತಿ, ಅಂತಃಕರಣ ನೆಲೆಯೂರಿತು’ ಎಂದರು.</p>.<p>ಶಾಸಕ ಜಿ.ಬಿ.ಜ್ಯೋತಿಗಣೇಶ್, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ, ಉಪನ್ಯಾಸಕರಾದ ನರಸಿಂಹಯ್ಯ, ಶ್ರೀನಿವಾಸ್ ಇತರರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-17-2139575422</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>