<p>ತುಮಕೂರು: ನಗರದ ಹೆಗ್ಗಡೆ ಕಾಲೊನಿ ಬಳಿ ಈಚೆಗೆ ಕಾರು ಅಡ್ಡಗಟ್ಟಿ ಬೆಳ್ಳಿ ಉಂಗುರ, ಮೊಬೈಲ್ ದೋಚಿದ್ದ ಮೂವರು ಸುಲಿಗೆಕೋರರನ್ನು ತಿಲಕ್ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ನಗರದ ವಿನೋಬ ನಗರದ ಮಂಜನಾಥ (24), ಹೆಗ್ಗಡೆ ಕಾಲೊನಿಯ ಸುಹೇಲ್ ಪಾಷ (26), ಅಪ್ರೋಜ್ ಪಾಷ (28) ಬಂಧಿತರು. ಆರೋಪಿಗಳಿಂದ ₹80 ಸಾವಿರ ಮೌಲ್ಯದ ಬೈಕ್, ₹25 ಸಾವಿರದ 2 ಮೊಬೈಲ್ ಜಪ್ತಿ ಮಾಡಲಾಗಿದೆ.</p>.<p>ಹಾಸನದ ಬಿ.ಜಿ.ಚೇತನ್ ತಮ್ಮ ಸ್ನೇಹಿತರ ಜತೆಗೆ ನಗರಕ್ಕೆ ಬರುವಾಗ ಸುಲಿಗೆಕೋರರು ಹೆಗ್ಗಡೆ ಕಾಲೊನಿಯ ರೈಲ್ವೆ ಕೆಳ ಸೇತುವೆ ಬಳಿ ಕಾರು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಚೇತನ್ ಮೇಲೆ ಹಲ್ಲೆ ನಡೆಸಿ, 2 ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಕುರಿತು ತಿಲಕ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೂವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ.</p>.<p>‘ತಿಲಕ್ಪಾರ್ಕ್ ಸಿಪಿಐ ಎಫ್.ಕೆ.ನದಾಫ್, ಪಿಎಸ್ಐ ಟಿ.ಕೆ.ಯೋಗೀಶ್, ಸಿಬ್ಬಂದಿ ರಾಮಕೃಷ್ಣ, ಶಶಿಕುಮಾರ್ ನಾಯ್ಕ್, ನಿಜಾಮುದ್ಧೀನ್ ಷಾ ಅವರ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260405-17-1674430498</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ನಗರದ ಹೆಗ್ಗಡೆ ಕಾಲೊನಿ ಬಳಿ ಈಚೆಗೆ ಕಾರು ಅಡ್ಡಗಟ್ಟಿ ಬೆಳ್ಳಿ ಉಂಗುರ, ಮೊಬೈಲ್ ದೋಚಿದ್ದ ಮೂವರು ಸುಲಿಗೆಕೋರರನ್ನು ತಿಲಕ್ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ನಗರದ ವಿನೋಬ ನಗರದ ಮಂಜನಾಥ (24), ಹೆಗ್ಗಡೆ ಕಾಲೊನಿಯ ಸುಹೇಲ್ ಪಾಷ (26), ಅಪ್ರೋಜ್ ಪಾಷ (28) ಬಂಧಿತರು. ಆರೋಪಿಗಳಿಂದ ₹80 ಸಾವಿರ ಮೌಲ್ಯದ ಬೈಕ್, ₹25 ಸಾವಿರದ 2 ಮೊಬೈಲ್ ಜಪ್ತಿ ಮಾಡಲಾಗಿದೆ.</p>.<p>ಹಾಸನದ ಬಿ.ಜಿ.ಚೇತನ್ ತಮ್ಮ ಸ್ನೇಹಿತರ ಜತೆಗೆ ನಗರಕ್ಕೆ ಬರುವಾಗ ಸುಲಿಗೆಕೋರರು ಹೆಗ್ಗಡೆ ಕಾಲೊನಿಯ ರೈಲ್ವೆ ಕೆಳ ಸೇತುವೆ ಬಳಿ ಕಾರು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಚೇತನ್ ಮೇಲೆ ಹಲ್ಲೆ ನಡೆಸಿ, 2 ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಕುರಿತು ತಿಲಕ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೂವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ.</p>.<p>‘ತಿಲಕ್ಪಾರ್ಕ್ ಸಿಪಿಐ ಎಫ್.ಕೆ.ನದಾಫ್, ಪಿಎಸ್ಐ ಟಿ.ಕೆ.ಯೋಗೀಶ್, ಸಿಬ್ಬಂದಿ ರಾಮಕೃಷ್ಣ, ಶಶಿಕುಮಾರ್ ನಾಯ್ಕ್, ನಿಜಾಮುದ್ಧೀನ್ ಷಾ ಅವರ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260405-17-1674430498</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>