<p>ತುಮಕೂರು: ‘ಜಮೀನಿನಲ್ಲಿ ಉಳುಮೆಮಾಡುವಾಗ ಚಿನ್ನದ ನಿಧಿ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು’ ಎಂದು ನಂಬಿಸಿ ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ಕೋನಸಾಗರದ ಶರಣೇಶ್ ಎಂಬುವರಿಗೆ ₹12 ಲಕ್ಷ ವಂಚಿಸಲಾಗಿದೆ.</p>.<p>ನಕಲಿ ಒಡವೆ ಕೊಟ್ಟು, ವಂಚಿಸಿದ ಆರೋಪದ ಮೇರೆಗೆ ಹಿರಿಯೂರಿನ ರಾಜಣ್ಣ, ಗಣೇಶ್ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ನಮ್ಮ ಊರಿನ ಕಡೆಗೆ ಹಕ್ಕಿ ಹಿಡಿಯಲು ಬಂದಾಗ ಇಬ್ಬರು ಆರೋಪಿಗಳ ಪರಿಚಯವಾಗಿತ್ತು. ಒಂದು ದಿನ ರಾಜಣ್ಣ ಕರೆ ಮಾಡಿ ಚಿನ್ನದ ನಿಧಿ ಬಗ್ಗೆ ತಿಳಿಸಿದ್ದರು. ನಾವು ಹೊರಗಡೆ ಮಾರಾಟ ಮಾಡಲು ಆಗುವುದಿಲ್ಲ. ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇವೆ. ₹12 ಲಕ್ಷ ನೀಡಿದರೆ ಒಡವೆ ಕೊಡಲಾಗುವುದು ಎಂದಿದ್ದರು. ನಮ್ಮ ತಂದೆ ಜತೆಗೆ ಚರ್ಚಿಸಿ ಹಣ ಕೊಡಲು ಒಪ್ಪಿದ್ದೆ’ ಎಂದು ಶರಣೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>ಮಾರ್ಚ್ 26ರಂದು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ರಾಜಣ್ಣ ಅವರಿಗೆ ₹2 ಲಕ್ಷ ನೀಡಿದೆ. ನಂತರ ಯಲ್ಲಾಪುರಕ್ಕೆ ತೆರಳಿ ಅಲ್ಲಿದ್ದ ಗಣೇಶ ಅವರಿಗೆ ₹10 ಲಕ್ಷ ತಲುಪಿಸಿದೆ. ಅವರು ನಮ್ಮನ್ನು ಯಲ್ಲಾಪುರ ದೊಡ್ಡ ಮೈದಾನಕ್ಕೆ ಕರೆದುಕೊಂಡು ಹೋಗಿ, ಗಿಡದ ಪೊದೆಯಲ್ಲಿ ನಿಂತು ಚಿನ್ನಾಭರಣದ ಮೂಟೆ ನೀಡಿದ್ದರು ಎಂದು ಹೇಳಿದ್ದಾರೆ.</p>.<p>15ರಿಂದ 20 ದಿನ ಮನೆಯಲ್ಲಿಟ್ಟು, ನಂತರ ಸ್ವಲ್ಪ ಚಿನ್ನವನ್ನು ಮೊಳಕಾಲ್ಮೂರಿನ ಚಿನ್ನದಂಗಡಿಯಲ್ಲಿ ಪರೀಕ್ಷೆ ನಡೆಸಲಾಯಿತು. ಆಗ ಅದು ನಕಲಿ ಬಂಗಾರ ಎಂಬುವುದು ತಿಳಿಯಿತು. ಚಿನ್ನ ಎಂದು ನಂಬಿಸಿ ಹಣ ಪಡೆದು ವಂಚಿಸಿದ ರಾಜಣ್ಣ, ಗಣೇಶ್ ವಿರುದ್ಧ ಕ್ರಮಕೈಗೊಳ್ಳುವಂತೆ ಶರಣೇಶ್ ಮನವಿ ಮಾಡಿದ್ದಾರೆ.</p>.<p>ಎರಡನೇ ಪ್ರಕರಣ: 2025ರಲ್ಲಿಯೂ ಇಂತಹ ಘಟನೆ ನಗರದ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ಬಳಿ ನಡೆದಿತ್ತು. ಆಂಧ್ರಪ್ರದೇಶದ ಪಲನಾಡು ಬಳಿಯ ಚಿಲಕಲೂರು ಪೇಟೆಯ ವೈ.ಪ್ರಸನ್ನಾ ಎಂಬುವರಿಗೆ ನಕಲಿ ಚಿನ್ನ ಕೊಟ್ಟು, ₹45 ಲಕ್ಷ ವಂಚಿಸಲಾಗಿತ್ತು. ಈ ಕುರಿತು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಅದೇ ರೀತಿಯ ಮತ್ತೊಂದು ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-17-65391183</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ‘ಜಮೀನಿನಲ್ಲಿ ಉಳುಮೆಮಾಡುವಾಗ ಚಿನ್ನದ ನಿಧಿ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು’ ಎಂದು ನಂಬಿಸಿ ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ಕೋನಸಾಗರದ ಶರಣೇಶ್ ಎಂಬುವರಿಗೆ ₹12 ಲಕ್ಷ ವಂಚಿಸಲಾಗಿದೆ.</p>.<p>ನಕಲಿ ಒಡವೆ ಕೊಟ್ಟು, ವಂಚಿಸಿದ ಆರೋಪದ ಮೇರೆಗೆ ಹಿರಿಯೂರಿನ ರಾಜಣ್ಣ, ಗಣೇಶ್ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ನಮ್ಮ ಊರಿನ ಕಡೆಗೆ ಹಕ್ಕಿ ಹಿಡಿಯಲು ಬಂದಾಗ ಇಬ್ಬರು ಆರೋಪಿಗಳ ಪರಿಚಯವಾಗಿತ್ತು. ಒಂದು ದಿನ ರಾಜಣ್ಣ ಕರೆ ಮಾಡಿ ಚಿನ್ನದ ನಿಧಿ ಬಗ್ಗೆ ತಿಳಿಸಿದ್ದರು. ನಾವು ಹೊರಗಡೆ ಮಾರಾಟ ಮಾಡಲು ಆಗುವುದಿಲ್ಲ. ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇವೆ. ₹12 ಲಕ್ಷ ನೀಡಿದರೆ ಒಡವೆ ಕೊಡಲಾಗುವುದು ಎಂದಿದ್ದರು. ನಮ್ಮ ತಂದೆ ಜತೆಗೆ ಚರ್ಚಿಸಿ ಹಣ ಕೊಡಲು ಒಪ್ಪಿದ್ದೆ’ ಎಂದು ಶರಣೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<p>ಮಾರ್ಚ್ 26ರಂದು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ರಾಜಣ್ಣ ಅವರಿಗೆ ₹2 ಲಕ್ಷ ನೀಡಿದೆ. ನಂತರ ಯಲ್ಲಾಪುರಕ್ಕೆ ತೆರಳಿ ಅಲ್ಲಿದ್ದ ಗಣೇಶ ಅವರಿಗೆ ₹10 ಲಕ್ಷ ತಲುಪಿಸಿದೆ. ಅವರು ನಮ್ಮನ್ನು ಯಲ್ಲಾಪುರ ದೊಡ್ಡ ಮೈದಾನಕ್ಕೆ ಕರೆದುಕೊಂಡು ಹೋಗಿ, ಗಿಡದ ಪೊದೆಯಲ್ಲಿ ನಿಂತು ಚಿನ್ನಾಭರಣದ ಮೂಟೆ ನೀಡಿದ್ದರು ಎಂದು ಹೇಳಿದ್ದಾರೆ.</p>.<p>15ರಿಂದ 20 ದಿನ ಮನೆಯಲ್ಲಿಟ್ಟು, ನಂತರ ಸ್ವಲ್ಪ ಚಿನ್ನವನ್ನು ಮೊಳಕಾಲ್ಮೂರಿನ ಚಿನ್ನದಂಗಡಿಯಲ್ಲಿ ಪರೀಕ್ಷೆ ನಡೆಸಲಾಯಿತು. ಆಗ ಅದು ನಕಲಿ ಬಂಗಾರ ಎಂಬುವುದು ತಿಳಿಯಿತು. ಚಿನ್ನ ಎಂದು ನಂಬಿಸಿ ಹಣ ಪಡೆದು ವಂಚಿಸಿದ ರಾಜಣ್ಣ, ಗಣೇಶ್ ವಿರುದ್ಧ ಕ್ರಮಕೈಗೊಳ್ಳುವಂತೆ ಶರಣೇಶ್ ಮನವಿ ಮಾಡಿದ್ದಾರೆ.</p>.<p>ಎರಡನೇ ಪ್ರಕರಣ: 2025ರಲ್ಲಿಯೂ ಇಂತಹ ಘಟನೆ ನಗರದ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ಬಳಿ ನಡೆದಿತ್ತು. ಆಂಧ್ರಪ್ರದೇಶದ ಪಲನಾಡು ಬಳಿಯ ಚಿಲಕಲೂರು ಪೇಟೆಯ ವೈ.ಪ್ರಸನ್ನಾ ಎಂಬುವರಿಗೆ ನಕಲಿ ಚಿನ್ನ ಕೊಟ್ಟು, ₹45 ಲಕ್ಷ ವಂಚಿಸಲಾಗಿತ್ತು. ಈ ಕುರಿತು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಅದೇ ರೀತಿಯ ಮತ್ತೊಂದು ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-17-65391183</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>