<p><strong>ತುಮಕೂರು</strong>: ಸಾರ್ವಜನಿಕರಿಗೆ ಜಲಚರ ಪ್ರಪಂಚ ಪರಿಚಯಿಸುವ ಉದ್ದೇಶದಿಂದ ಆರಂಭಿಸಿರುವ ಮತ್ಸ್ಯಾಲಯ ಮಂಕಾಗಿದೆ. ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ದಿನೇ ದಿನೇ ಕುಸಿಯತೊಡಗಿದೆ.</p>.<p>ನಗರದ ಜಿಲ್ಲಾ ಕ್ರೀಡಾಂಗಣದ ರಸ್ತೆಯಲ್ಲಿರುವ ಮೀನುಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ 2003ರಲ್ಲಿ ಮತ್ಸ್ಯಾಲಯ ಕಟ್ಟಡ ಉದ್ಘಾಟಿಸಲಾಗಿದೆ. ನಿರ್ವಹಣೆ ಕೊರತೆಯ ಕಾರಣಕ್ಕೆ 2017ರಲ್ಲಿ ಇದರ ಬಾಗಿಲು ಮುಚ್ಚಲಾಗಿತ್ತು. 7 ವರ್ಷಗಳ ನಂತರ 2024ರಲ್ಲಿ ನವೀಕರಣ ಕಾರ್ಯ ಪ್ರಾರಂಭಿಸಲಾಯಿತು. ₹15 ಲಕ್ಷ ವೆಚ್ಚದಲ್ಲಿ ಮತ್ಸ್ಯಾಲಯಕ್ಕೆ ಕಾಯಕಲ್ಪ ನೀಡಲಾಯಿತು. 2025ರ ಜುಲೈ 15ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ನವೀಕೃತ ಕಟ್ಟಡಕ್ಕೆ ಚಾಲನೆ ನೀಡಿದ್ದರು.</p>.<p>ಕಳೆದ ಆರು ತಿಂಗಳಲ್ಲಿ 1,326 ಶಾಲಾ ಮಕ್ಕಳು, 1,785 ಸಾರ್ವಜನಿಕರು ಸೇರಿ 3,111 ಮಂದಿ ಮತ್ಸ್ಯಾಲಯದ ಮೀನುಗಳನ್ನು ವೀಕ್ಷಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿದೆ. ಸಾಮಾನ್ಯ ಜನರಿಗೆ ₹10 ಶುಲ್ಕ ನಿಗದಿ ಪಡಿಸಲಾಗಿದೆ. 2025ರ ಜುಲೈ 15ರಿಂದ 2026ರ ಜನವರಿ ಅಂತ್ಯಕ್ಕೆ ₹25,875 ಸಂಗ್ರಹವಾಗಿದೆ. ಇದರಲ್ಲಿ ₹13,545 ಯುಪಿಐ ಮೂಲಕ ಸ್ವೀಕರಿಸಿದ್ದು, ₹12,330 ನಗದು ಪಡೆಯಲಾಗಿದೆ.</p>.<p>ನವೀಕೃತ ಮತ್ಸ್ಯಾಲಯ ಆರಂಭಿಸಿದ ಹೊಸತರಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು, ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ದಿನಗಳು ಕಳೆದಂತೆ ಇತ್ತ ಸುಳಿಯುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮೀನುಗಾರಿಕೆ ಇಲಾಖೆಗೆ ಇದರ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಅಕ್ವೇರಿಯಂಗಳ ವಿದ್ಯುತ್ ಪೂರೈಕೆಗೆ ಪ್ರತಿ ತಿಂಗಳು ₹25 ಸಾವಿರ ಶುಲ್ಕ ಪಾವತಿಸಲಾಗುತ್ತಿದೆ. ಇಲ್ಲಿನ ಸಿಬ್ಬಂದಿಗೆ ಸಂಬಳ, ನೀರು ಪೂರೈಕೆ ಸೇರಿ ಮಾಹೆಯಾನ ₹50 ಸಾವಿರ ಖರ್ಚು ಬರುತ್ತಿದೆ. ಕನಿಷ್ಠ ನಿರ್ವಹಣೆಗೆ ಬೇಕಾದ ಹಣವೂ ಶುಲ್ಕದ ರೂಪದಲ್ಲಿ ಸಂಗ್ರಹ ಆಗುತ್ತಿಲ್ಲ. ಒಂದು ರೀತಿಯಲ್ಲಿ ಮತ್ಸ್ಯಾಲಯ ಹೊರೆಯಾಗಿದೆ.</p>.<p>ಮತ್ಸ್ಯಾಲಯದ 36 ಅಕ್ವೇರಿಯಂಗಳಲ್ಲಿ ವಿವಿಧ ಬಗೆಯ ಸುಮಾರು 70ಕ್ಕೂ ಹೆಚ್ಚಿನ ಪ್ರಭೇದದ ಅಲಂಕಾರಿಕ ಮೀನುಗಳಿವೆ. ಮುಖ್ಯವಾಗಿ ಮಕ್ಕಳಿಗೆ ಜಲಚರದ ಕುರಿತು ಅರಿವು ಮೂಡಿಸಲು, ಪಠ್ಯಕ್ಕೆ ಪೂರಕವಾಗಿ ಜ್ಞಾನ ಬಿತ್ತುವ ನಿಟ್ಟಿನಲ್ಲಿ ಮತ್ಸ್ಯಾಲಯಕ್ಕೆ ಹೊಸ ಸ್ಪರ್ಶ ಕೊಡಲಾಯಿತು. ಜಿಲ್ಲಾ ಪಂಚಾಯಿತಿಯ ಹಿಂದಿನ ಸಿಇಒ ಜಿ.ಪ್ರಭು ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಪ್ರಾರಂಭದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಮಕ್ಕಳು, ಜನರು ನಂತರ ದಿನಗಳಲ್ಲಿ ಇತ್ತ ತಿರುಗಿಯೂ ನೋಡಲಿಲ್ಲ. ಇದರ ಪರಿಣಾಮ ಮತ್ಸ್ಯಾಲಯ ಜನರಿಲ್ಲದೆ ಬಿಕೋ ಎನ್ನುತ್ತಿದೆ.</p>.<p><strong>ಮತ್ಸ್ಯಾಲಯ ವೀಕ್ಷಣೆಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಅವರನ್ನು ಕರೆದುಕೊಂಡು ಬರುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಚಾರ ಕಾರ್ಯ ನಡೆಸಲಾಗುವುದು </strong></p><p><strong>–ಮೋಹನ್ಕುಮಾರ್ ಸಹಾಯಕ ನಿರ್ದೇಶಕ ಮೀನುಗಾರಿಕಾ ಇಲಾಖೆ</strong></p>.<p> ಆ್ಯಂಪಿ ಥಿಯೇಟರ್ಗೆ ನಿಧಾನ ಮೀನುಗಾರಿಕೆ ಇಲಾಖೆ ಕಟ್ಟಡದಲ್ಲಿ ಆ್ಯಂಪಿ ಥಿಯೇಟರ್ ನಿರ್ಮಾಣದ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ. ಕಳೆದ ಜುಲೈನಲ್ಲಿ ಮಕ್ಕಳಿಗಾಗಿ ₹12 ಲಕ್ಷ ವೆಚ್ಚದಲ್ಲಿ 40 ಆಸನಗಳ ಸಾಮರ್ಥ್ಯದ ಥಿಯೇಟರ್ ಆರಂಭಿಸಲು ಸಿದ್ಧತೆ ನಡೆದಿತ್ತು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿ ಥಿಯೇಟರ್ ನಿರ್ಮಿಸಲಾಗುತ್ತಿದೆ. ಇದು ಪೂರ್ಣಗೊಳ್ಳಲು ಇನ್ನೂ ಕನಿಷ್ಠ ಐದಾರು ತಿಂಗಳು ಬೇಕಾಗಬಹುದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಸಾರ್ವಜನಿಕರಿಗೆ ಜಲಚರ ಪ್ರಪಂಚ ಪರಿಚಯಿಸುವ ಉದ್ದೇಶದಿಂದ ಆರಂಭಿಸಿರುವ ಮತ್ಸ್ಯಾಲಯ ಮಂಕಾಗಿದೆ. ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ದಿನೇ ದಿನೇ ಕುಸಿಯತೊಡಗಿದೆ.</p>.<p>ನಗರದ ಜಿಲ್ಲಾ ಕ್ರೀಡಾಂಗಣದ ರಸ್ತೆಯಲ್ಲಿರುವ ಮೀನುಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ 2003ರಲ್ಲಿ ಮತ್ಸ್ಯಾಲಯ ಕಟ್ಟಡ ಉದ್ಘಾಟಿಸಲಾಗಿದೆ. ನಿರ್ವಹಣೆ ಕೊರತೆಯ ಕಾರಣಕ್ಕೆ 2017ರಲ್ಲಿ ಇದರ ಬಾಗಿಲು ಮುಚ್ಚಲಾಗಿತ್ತು. 7 ವರ್ಷಗಳ ನಂತರ 2024ರಲ್ಲಿ ನವೀಕರಣ ಕಾರ್ಯ ಪ್ರಾರಂಭಿಸಲಾಯಿತು. ₹15 ಲಕ್ಷ ವೆಚ್ಚದಲ್ಲಿ ಮತ್ಸ್ಯಾಲಯಕ್ಕೆ ಕಾಯಕಲ್ಪ ನೀಡಲಾಯಿತು. 2025ರ ಜುಲೈ 15ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ನವೀಕೃತ ಕಟ್ಟಡಕ್ಕೆ ಚಾಲನೆ ನೀಡಿದ್ದರು.</p>.<p>ಕಳೆದ ಆರು ತಿಂಗಳಲ್ಲಿ 1,326 ಶಾಲಾ ಮಕ್ಕಳು, 1,785 ಸಾರ್ವಜನಿಕರು ಸೇರಿ 3,111 ಮಂದಿ ಮತ್ಸ್ಯಾಲಯದ ಮೀನುಗಳನ್ನು ವೀಕ್ಷಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿದೆ. ಸಾಮಾನ್ಯ ಜನರಿಗೆ ₹10 ಶುಲ್ಕ ನಿಗದಿ ಪಡಿಸಲಾಗಿದೆ. 2025ರ ಜುಲೈ 15ರಿಂದ 2026ರ ಜನವರಿ ಅಂತ್ಯಕ್ಕೆ ₹25,875 ಸಂಗ್ರಹವಾಗಿದೆ. ಇದರಲ್ಲಿ ₹13,545 ಯುಪಿಐ ಮೂಲಕ ಸ್ವೀಕರಿಸಿದ್ದು, ₹12,330 ನಗದು ಪಡೆಯಲಾಗಿದೆ.</p>.<p>ನವೀಕೃತ ಮತ್ಸ್ಯಾಲಯ ಆರಂಭಿಸಿದ ಹೊಸತರಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು, ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ದಿನಗಳು ಕಳೆದಂತೆ ಇತ್ತ ಸುಳಿಯುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮೀನುಗಾರಿಕೆ ಇಲಾಖೆಗೆ ಇದರ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಅಕ್ವೇರಿಯಂಗಳ ವಿದ್ಯುತ್ ಪೂರೈಕೆಗೆ ಪ್ರತಿ ತಿಂಗಳು ₹25 ಸಾವಿರ ಶುಲ್ಕ ಪಾವತಿಸಲಾಗುತ್ತಿದೆ. ಇಲ್ಲಿನ ಸಿಬ್ಬಂದಿಗೆ ಸಂಬಳ, ನೀರು ಪೂರೈಕೆ ಸೇರಿ ಮಾಹೆಯಾನ ₹50 ಸಾವಿರ ಖರ್ಚು ಬರುತ್ತಿದೆ. ಕನಿಷ್ಠ ನಿರ್ವಹಣೆಗೆ ಬೇಕಾದ ಹಣವೂ ಶುಲ್ಕದ ರೂಪದಲ್ಲಿ ಸಂಗ್ರಹ ಆಗುತ್ತಿಲ್ಲ. ಒಂದು ರೀತಿಯಲ್ಲಿ ಮತ್ಸ್ಯಾಲಯ ಹೊರೆಯಾಗಿದೆ.</p>.<p>ಮತ್ಸ್ಯಾಲಯದ 36 ಅಕ್ವೇರಿಯಂಗಳಲ್ಲಿ ವಿವಿಧ ಬಗೆಯ ಸುಮಾರು 70ಕ್ಕೂ ಹೆಚ್ಚಿನ ಪ್ರಭೇದದ ಅಲಂಕಾರಿಕ ಮೀನುಗಳಿವೆ. ಮುಖ್ಯವಾಗಿ ಮಕ್ಕಳಿಗೆ ಜಲಚರದ ಕುರಿತು ಅರಿವು ಮೂಡಿಸಲು, ಪಠ್ಯಕ್ಕೆ ಪೂರಕವಾಗಿ ಜ್ಞಾನ ಬಿತ್ತುವ ನಿಟ್ಟಿನಲ್ಲಿ ಮತ್ಸ್ಯಾಲಯಕ್ಕೆ ಹೊಸ ಸ್ಪರ್ಶ ಕೊಡಲಾಯಿತು. ಜಿಲ್ಲಾ ಪಂಚಾಯಿತಿಯ ಹಿಂದಿನ ಸಿಇಒ ಜಿ.ಪ್ರಭು ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಪ್ರಾರಂಭದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಮಕ್ಕಳು, ಜನರು ನಂತರ ದಿನಗಳಲ್ಲಿ ಇತ್ತ ತಿರುಗಿಯೂ ನೋಡಲಿಲ್ಲ. ಇದರ ಪರಿಣಾಮ ಮತ್ಸ್ಯಾಲಯ ಜನರಿಲ್ಲದೆ ಬಿಕೋ ಎನ್ನುತ್ತಿದೆ.</p>.<p><strong>ಮತ್ಸ್ಯಾಲಯ ವೀಕ್ಷಣೆಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಅವರನ್ನು ಕರೆದುಕೊಂಡು ಬರುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಚಾರ ಕಾರ್ಯ ನಡೆಸಲಾಗುವುದು </strong></p><p><strong>–ಮೋಹನ್ಕುಮಾರ್ ಸಹಾಯಕ ನಿರ್ದೇಶಕ ಮೀನುಗಾರಿಕಾ ಇಲಾಖೆ</strong></p>.<p> ಆ್ಯಂಪಿ ಥಿಯೇಟರ್ಗೆ ನಿಧಾನ ಮೀನುಗಾರಿಕೆ ಇಲಾಖೆ ಕಟ್ಟಡದಲ್ಲಿ ಆ್ಯಂಪಿ ಥಿಯೇಟರ್ ನಿರ್ಮಾಣದ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ. ಕಳೆದ ಜುಲೈನಲ್ಲಿ ಮಕ್ಕಳಿಗಾಗಿ ₹12 ಲಕ್ಷ ವೆಚ್ಚದಲ್ಲಿ 40 ಆಸನಗಳ ಸಾಮರ್ಥ್ಯದ ಥಿಯೇಟರ್ ಆರಂಭಿಸಲು ಸಿದ್ಧತೆ ನಡೆದಿತ್ತು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿ ಥಿಯೇಟರ್ ನಿರ್ಮಿಸಲಾಗುತ್ತಿದೆ. ಇದು ಪೂರ್ಣಗೊಳ್ಳಲು ಇನ್ನೂ ಕನಿಷ್ಠ ಐದಾರು ತಿಂಗಳು ಬೇಕಾಗಬಹುದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>