<p><strong>ತುಮಕೂರು</strong>: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ಐದು ವರ್ಷ ಕಳೆದರೂ ಪಂಪ್, ಮೋಟರ್ ವಿತರಿಸಿಲ್ಲ. ಬೋರ್ವೆಲ್ನಲ್ಲಿ ನೀರು ಬಂದರೂ ಜಮೀನುಗಳಿಗೆ ಹರಿಯುತ್ತಿಲ್ಲ. ನೀರಿಲ್ಲದೆ ಅಡಿಕೆ, ತೆಂಗು ಇತರೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.</p>.<p>ಗುಬ್ಬಿ ಮತ್ತು ತುರುವೇಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 34 ರೈತರಿಗೆ 2018-19ನೇ ಸಾಲಿನಲ್ಲಿ ಕೊಳವೆ ಬಾವಿ ಮಂಜೂರು ಮಾಡಲಾಗಿತ್ತು. 2021ರಲ್ಲಿ ಬೋರ್ವೆಲ್ ಕೊರೆದಿದ್ದರೂ ಅಲ್ಲಿಂದ ಈವರೆಗೆ ವಿದ್ಯುತ್ ಪರಿವರ್ತಕ (ಟಿ.ಸಿ), ಪಂಪ್, ಮೋಟರ್ ವಿತರಣೆಯಾಗಿಲ್ಲ. ಅಭಿವೃದ್ಧಿ ನಿಗಮದಿಂದ ಖಾಸಗಿ ಸಂಸ್ಥೆಗೆ ಬೋರ್ವೆಲ್ ಕೊರೆಸುವ ಗುತ್ತಿಗೆ ನೀಡಲಾಗಿತ್ತು. ಕೆಲಸ ಮುಗಿದ ನಂತರ ಅಗತ್ಯ ಪರಿಕರ ರೈತರ ಕೈ ಸೇರಿಲ್ಲ.</p>.<p>ಜಮೀನಿನಲ್ಲಿ ನೀರು ಜಿನುಗುತ್ತಿದ್ದಂತೆ ರೈತರ ಸಂಭ್ರಮ ದುಪ್ಪಟ್ಟಾಗಿತ್ತು. ಎಲ್ಲ ಕಷ್ಟಗಳು ದೂರಾಗಿ ನೆಮ್ಮದಿಯ ಬದುಕು ಸಿಗಲಿದೆ ಎಂಬ ಕನಸು ಕಂಡಿದ್ದರು. ಇದಕ್ಕೆ ಪೂರಕವಾಗಿ ಹೊಲಗಳಲ್ಲಿ ಅಡಿಕೆ, ತೆಂಗಿನ ಗಿಡ ನೆಟ್ಟಿದ್ದರು. ಸಕಾಲಕ್ಕೆ ಪರಿಕರ ಸಿಗಲಿಲ್ಲ. ನಾಲ್ಕು ವರ್ಷದಿಂದ ಟ್ಯಾಂಕರ್ ಮೂಲಕ, ಅಕ್ಕಪಕ್ಕದ ಜಮೀನಿನ ಕೊಳವೆ ಬಾವಿಗಳಿಂದ ನೀರುಣಿಸುತ್ತಿದ್ದಾರೆ.</p>.<p>ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ಈಗ ಮತ್ತೆ ಬೇಸಿಗೆ ಶುರುವಾಗಿದ್ದು, ಟ್ಯಾಂಕರ್ ನೀರಿಗೂ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ ಆರಂಭದಲ್ಲಿಯೇ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಜಮೀನಿನಲ್ಲಿ ಬೋರ್ವೆಲ್ ಇದ್ದೂ ಪ್ರಯೋಜನಕ್ಕೆ ಬಾರದಂತಾಗಿದೆ.</p>.<p>‘ಅಗತ್ಯ ಸಲಕರಣೆ ವಿತರಿಸಲು ಯಾಕೆ ತಡವಾಗುತ್ತಿದೆ ಎಂಬ ಪ್ರಶ್ನೆಗೆ ಯಾರೊಬ್ಬರೂ ಬಳಿಯೂ ಸರಿಯಾದ ಉತ್ತರ ಇಲ್ಲ. ‘ಬೋರ್ವೆಲ್ ಕೊರೆಸುವ ಟೆಂಡರ್ ಒಬ್ಬರಿಗೆ ಆಗಿದ್ದು, ಮತ್ತೊಬ್ಬರು ಬಾವಿ ಕೊರೆದಿದ್ದರು. ತಾಂತ್ರಿಕ ತೊಂದರೆಯಿಂದ ಹೀಗಾಗಿದೆ’ ಎಂದು ಕೆಲ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ನಿಗಮದ ಜಿಲ್ಲಾ ವ್ಯವಸ್ಥಾಪಕರು, ಬೆಂಗಳೂರಿನ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.</p>.<p>ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ 3 ಬಾರಿ ಮನವಿ ಸಲ್ಲಿಸಲಾಗಿದೆ. ಕನಿಷ್ಠ ಕ್ರಮಕೈಗೊಂಡಿಲ್ಲ. ಬೆಂಗಳೂರು, ತುಮಕೂರು ಕಚೇರಿಗಳಿಗೆ ಅಲೆಯುವುದು ರೈತರ ಕಾಯಕವಾಗಿದೆ. ಕೊಳವೆ ಬಾವಿ ಕೊರೆಸಿದ ನಂತರವೂ ನೀರಿನ ಸಂಪರ್ಕಕ್ಕಾಗಿ ಇಷ್ಟೆಲ್ಲ ಅಲೆದಾಡಿಸುತ್ತಿದ್ದಾರೆ. ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬಂತಾಗಿದೆ ಸದ್ಯದ ಪರಿಸ್ಥಿತಿ ಎಂದು ಗುಬ್ಬಿಯ ರೈತ ರಮೇಶ್ ಬೇಸರ ವ್ಯಕ್ತಪಡಿಸಿದರು.</p>.<p>ಒಂದು ತಿಂಗಳು ಸಮಯ ಕೊಳವೆ ಬಾವಿ ಕೊರೆಸಿದಾಗ ಒಂದು ತಿಂಗಳ ಅವಧಿಯಲ್ಲಿ ಪರಿಕರ ನೀಡಲಾಗುವುದು ಎಂದು ತಿಳಿಸಿದ್ದರು. ಈಗ ದಿನಗಳನ್ನು ಎಣಿಸುತ್ತಿದ್ದೇವೆ. ಬೋರ್ವೆಲ್ ಮಾತ್ರ ಹಾಗೆ ಇದೆ. ನೀರು ಸಿಕ್ಕಿದೆ ಎಂದು ಅಡಿಕೆ ತೆಂಗು ಹಾಕಿದ ರೈತರ ಸ್ಥಿತಿ ತುಂಬಾ ಕೆಟ್ಟದಾಗಿದೆ. ಅನಿವಾರ್ಯವಾಗಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಬೆಳೆ ಕಾಪಾಡಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ರಮೇಶ್ ರೈತ ಗುಬ್ಬಿ ತಾಲ್ಲೂಕು </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ಐದು ವರ್ಷ ಕಳೆದರೂ ಪಂಪ್, ಮೋಟರ್ ವಿತರಿಸಿಲ್ಲ. ಬೋರ್ವೆಲ್ನಲ್ಲಿ ನೀರು ಬಂದರೂ ಜಮೀನುಗಳಿಗೆ ಹರಿಯುತ್ತಿಲ್ಲ. ನೀರಿಲ್ಲದೆ ಅಡಿಕೆ, ತೆಂಗು ಇತರೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.</p>.<p>ಗುಬ್ಬಿ ಮತ್ತು ತುರುವೇಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 34 ರೈತರಿಗೆ 2018-19ನೇ ಸಾಲಿನಲ್ಲಿ ಕೊಳವೆ ಬಾವಿ ಮಂಜೂರು ಮಾಡಲಾಗಿತ್ತು. 2021ರಲ್ಲಿ ಬೋರ್ವೆಲ್ ಕೊರೆದಿದ್ದರೂ ಅಲ್ಲಿಂದ ಈವರೆಗೆ ವಿದ್ಯುತ್ ಪರಿವರ್ತಕ (ಟಿ.ಸಿ), ಪಂಪ್, ಮೋಟರ್ ವಿತರಣೆಯಾಗಿಲ್ಲ. ಅಭಿವೃದ್ಧಿ ನಿಗಮದಿಂದ ಖಾಸಗಿ ಸಂಸ್ಥೆಗೆ ಬೋರ್ವೆಲ್ ಕೊರೆಸುವ ಗುತ್ತಿಗೆ ನೀಡಲಾಗಿತ್ತು. ಕೆಲಸ ಮುಗಿದ ನಂತರ ಅಗತ್ಯ ಪರಿಕರ ರೈತರ ಕೈ ಸೇರಿಲ್ಲ.</p>.<p>ಜಮೀನಿನಲ್ಲಿ ನೀರು ಜಿನುಗುತ್ತಿದ್ದಂತೆ ರೈತರ ಸಂಭ್ರಮ ದುಪ್ಪಟ್ಟಾಗಿತ್ತು. ಎಲ್ಲ ಕಷ್ಟಗಳು ದೂರಾಗಿ ನೆಮ್ಮದಿಯ ಬದುಕು ಸಿಗಲಿದೆ ಎಂಬ ಕನಸು ಕಂಡಿದ್ದರು. ಇದಕ್ಕೆ ಪೂರಕವಾಗಿ ಹೊಲಗಳಲ್ಲಿ ಅಡಿಕೆ, ತೆಂಗಿನ ಗಿಡ ನೆಟ್ಟಿದ್ದರು. ಸಕಾಲಕ್ಕೆ ಪರಿಕರ ಸಿಗಲಿಲ್ಲ. ನಾಲ್ಕು ವರ್ಷದಿಂದ ಟ್ಯಾಂಕರ್ ಮೂಲಕ, ಅಕ್ಕಪಕ್ಕದ ಜಮೀನಿನ ಕೊಳವೆ ಬಾವಿಗಳಿಂದ ನೀರುಣಿಸುತ್ತಿದ್ದಾರೆ.</p>.<p>ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ಈಗ ಮತ್ತೆ ಬೇಸಿಗೆ ಶುರುವಾಗಿದ್ದು, ಟ್ಯಾಂಕರ್ ನೀರಿಗೂ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ ಆರಂಭದಲ್ಲಿಯೇ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಜಮೀನಿನಲ್ಲಿ ಬೋರ್ವೆಲ್ ಇದ್ದೂ ಪ್ರಯೋಜನಕ್ಕೆ ಬಾರದಂತಾಗಿದೆ.</p>.<p>‘ಅಗತ್ಯ ಸಲಕರಣೆ ವಿತರಿಸಲು ಯಾಕೆ ತಡವಾಗುತ್ತಿದೆ ಎಂಬ ಪ್ರಶ್ನೆಗೆ ಯಾರೊಬ್ಬರೂ ಬಳಿಯೂ ಸರಿಯಾದ ಉತ್ತರ ಇಲ್ಲ. ‘ಬೋರ್ವೆಲ್ ಕೊರೆಸುವ ಟೆಂಡರ್ ಒಬ್ಬರಿಗೆ ಆಗಿದ್ದು, ಮತ್ತೊಬ್ಬರು ಬಾವಿ ಕೊರೆದಿದ್ದರು. ತಾಂತ್ರಿಕ ತೊಂದರೆಯಿಂದ ಹೀಗಾಗಿದೆ’ ಎಂದು ಕೆಲ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ನಿಗಮದ ಜಿಲ್ಲಾ ವ್ಯವಸ್ಥಾಪಕರು, ಬೆಂಗಳೂರಿನ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.</p>.<p>ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ 3 ಬಾರಿ ಮನವಿ ಸಲ್ಲಿಸಲಾಗಿದೆ. ಕನಿಷ್ಠ ಕ್ರಮಕೈಗೊಂಡಿಲ್ಲ. ಬೆಂಗಳೂರು, ತುಮಕೂರು ಕಚೇರಿಗಳಿಗೆ ಅಲೆಯುವುದು ರೈತರ ಕಾಯಕವಾಗಿದೆ. ಕೊಳವೆ ಬಾವಿ ಕೊರೆಸಿದ ನಂತರವೂ ನೀರಿನ ಸಂಪರ್ಕಕ್ಕಾಗಿ ಇಷ್ಟೆಲ್ಲ ಅಲೆದಾಡಿಸುತ್ತಿದ್ದಾರೆ. ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬಂತಾಗಿದೆ ಸದ್ಯದ ಪರಿಸ್ಥಿತಿ ಎಂದು ಗುಬ್ಬಿಯ ರೈತ ರಮೇಶ್ ಬೇಸರ ವ್ಯಕ್ತಪಡಿಸಿದರು.</p>.<p>ಒಂದು ತಿಂಗಳು ಸಮಯ ಕೊಳವೆ ಬಾವಿ ಕೊರೆಸಿದಾಗ ಒಂದು ತಿಂಗಳ ಅವಧಿಯಲ್ಲಿ ಪರಿಕರ ನೀಡಲಾಗುವುದು ಎಂದು ತಿಳಿಸಿದ್ದರು. ಈಗ ದಿನಗಳನ್ನು ಎಣಿಸುತ್ತಿದ್ದೇವೆ. ಬೋರ್ವೆಲ್ ಮಾತ್ರ ಹಾಗೆ ಇದೆ. ನೀರು ಸಿಕ್ಕಿದೆ ಎಂದು ಅಡಿಕೆ ತೆಂಗು ಹಾಕಿದ ರೈತರ ಸ್ಥಿತಿ ತುಂಬಾ ಕೆಟ್ಟದಾಗಿದೆ. ಅನಿವಾರ್ಯವಾಗಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಬೆಳೆ ಕಾಪಾಡಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ರಮೇಶ್ ರೈತ ಗುಬ್ಬಿ ತಾಲ್ಲೂಕು </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>