<p>ಗುಬ್ಬಿ: ಕುರಿಗಳ ಮೈ ತೊಳೆಯಲು ಹೋದ ಕಸಬಾ ಹೋಬಳಿ ಅಮ್ಮನಘಟ್ಟ ಮಜರೆ ಕೋಡಿಹಟ್ಟಿ ಗ್ರಾಮದ ಶಿವಣ್ಣ (48) ಆಕಸ್ಮಿಕವಾಗಿ ನೀರಿಗೆ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.</p>.<p>ಶಿವಣ್ಣ ಗ್ರಾಮದ ಸಮೀಪವಿರುವ ಕೆರೆಯಲ್ಲಿ ಅವರ ಪತ್ನಿಯೊಡನೆ ಕುರಿಗಳ ಮೈ ತೊಳೆಯುವ ಸಂದರ್ಭದಲ್ಲಿ ನೀರಿಗೆ ಜಾರಿದ್ದಾರೆ. ಶಿವಣ್ಣರ ಪತ್ನಿ ದಡದಲ್ಲಿದ್ದ ಹಗ್ಗವನ್ನು ಎಸೆದು ಪತಿಯನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಸಮೀಪದಲ್ಲಿದ್ದ ಗ್ರಾಮಸ್ಥರು ಓಡಿ ಬರುವಷ್ಟರಲ್ಲಿ ಶಿವಣ್ಣ ನೀರಿನಲ್ಲಿ ಮುಳುಗಿದ್ದರು.</p>.<p>ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಾಯದೊಂದಿಗೆ ಶವವನ್ನು ನೀರಿನಿಂದ ಹೊರತೆಗೆದು ಅಗತ್ಯ ಕ್ರಮ ಕೈಗೊಂಡಿದ್ದಾರೆ.</p>.<p>ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಶಿವಣ್ಣರ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೀರು ಇಲ್ಲದಿರುವ ಸಮಯದಲ್ಲಿ ಸುತ್ತಮುತ್ತಲಿನ ಜಮೀನಿನವರು ಯಂತ್ರಗಳಿಂದ ಮಣ್ಣನ್ನು ತೆಗೆದಿರುವುದರಿಂದ ಆಳವಾದ ಗುಂಡಿಗಳಾಗಿವೆ. ನೀರು ಇರುವ ಸಂದರ್ಭದಲ್ಲಿ ಗುಂಡಿಗಳು ಕಾಣದೇ ಇರುವುದರಿಂದ ಅವಘಡಗಳಿಗೆ ಕಾರಣವಾಗುತ್ತಿದೆ.</p>.<p>ಈಗಾಗಲೇ ಈ ಕೆರೆಯಲ್ಲಿ ಸುಮಾರು 5-6 ಜನ ಬಿದ್ದು ಸಾವನ್ನಪ್ಪಿದ್ದಾರೆ. ಕೆರೆ ಮಣ್ಣು ತೆಗೆಯುವ ನೆಪದಲ್ಲಿ ಆಳವಾದ ಗುಂಡಿ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-17-709186755</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಬ್ಬಿ: ಕುರಿಗಳ ಮೈ ತೊಳೆಯಲು ಹೋದ ಕಸಬಾ ಹೋಬಳಿ ಅಮ್ಮನಘಟ್ಟ ಮಜರೆ ಕೋಡಿಹಟ್ಟಿ ಗ್ರಾಮದ ಶಿವಣ್ಣ (48) ಆಕಸ್ಮಿಕವಾಗಿ ನೀರಿಗೆ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.</p>.<p>ಶಿವಣ್ಣ ಗ್ರಾಮದ ಸಮೀಪವಿರುವ ಕೆರೆಯಲ್ಲಿ ಅವರ ಪತ್ನಿಯೊಡನೆ ಕುರಿಗಳ ಮೈ ತೊಳೆಯುವ ಸಂದರ್ಭದಲ್ಲಿ ನೀರಿಗೆ ಜಾರಿದ್ದಾರೆ. ಶಿವಣ್ಣರ ಪತ್ನಿ ದಡದಲ್ಲಿದ್ದ ಹಗ್ಗವನ್ನು ಎಸೆದು ಪತಿಯನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಸಮೀಪದಲ್ಲಿದ್ದ ಗ್ರಾಮಸ್ಥರು ಓಡಿ ಬರುವಷ್ಟರಲ್ಲಿ ಶಿವಣ್ಣ ನೀರಿನಲ್ಲಿ ಮುಳುಗಿದ್ದರು.</p>.<p>ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಾಯದೊಂದಿಗೆ ಶವವನ್ನು ನೀರಿನಿಂದ ಹೊರತೆಗೆದು ಅಗತ್ಯ ಕ್ರಮ ಕೈಗೊಂಡಿದ್ದಾರೆ.</p>.<p>ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಶಿವಣ್ಣರ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೀರು ಇಲ್ಲದಿರುವ ಸಮಯದಲ್ಲಿ ಸುತ್ತಮುತ್ತಲಿನ ಜಮೀನಿನವರು ಯಂತ್ರಗಳಿಂದ ಮಣ್ಣನ್ನು ತೆಗೆದಿರುವುದರಿಂದ ಆಳವಾದ ಗುಂಡಿಗಳಾಗಿವೆ. ನೀರು ಇರುವ ಸಂದರ್ಭದಲ್ಲಿ ಗುಂಡಿಗಳು ಕಾಣದೇ ಇರುವುದರಿಂದ ಅವಘಡಗಳಿಗೆ ಕಾರಣವಾಗುತ್ತಿದೆ.</p>.<p>ಈಗಾಗಲೇ ಈ ಕೆರೆಯಲ್ಲಿ ಸುಮಾರು 5-6 ಜನ ಬಿದ್ದು ಸಾವನ್ನಪ್ಪಿದ್ದಾರೆ. ಕೆರೆ ಮಣ್ಣು ತೆಗೆಯುವ ನೆಪದಲ್ಲಿ ಆಳವಾದ ಗುಂಡಿ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-17-709186755</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>