<p>ತುಮಕೂರು: ಮಹಾವೀರ ಜಯಂತಿ ಪ್ರಯುಕ್ತ ದಿಗಂಬರ ಜೈನ ಸಮಾಜದ ವತಿಯಿಂದ ನಗರದಲ್ಲಿ ಮಂಗಳವಾರ ಮಹಾವೀರ ಪುತ್ಥಳಿ ಮೆರವಣಿಗೆ ನಡೆಯಿತು.</p>.<p>ಚಿಕ್ಕಪೇಟೆಯಲ್ಲಿರುವ ಜೈನ ದೇವಾಲಯದ ಬಳಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಎಂ.ಜಿ.ರಸ್ತೆ ಮೂಲಕ ಬಿ.ಎಚ್.ರಸ್ತೆಯಲ್ಲಿ ಸಾಗಿತು. ಜೈನ ಭವನದ ಬಳಿ ಮೆರವಣಿಗೆ ಕೊನೆಯಾಯಿತು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.</p>.<p>ಜೈನ ಸಮುದಾಯದ ಮುಖಂಡ ಸುರೇಶ್ ಕುಮಾರ್ ಮಾತನಾಡಿ, ‘ಜಗತ್ತು ಮಹಾವೀರರ ಅಹಿಂಸಾ ಮಾರ್ಗ ಪಾಲಿಸಬೇಕು. ಎಲ್ಲರೂ ಶಾಂತಿಯಿಂದ ಬದುಕು ನಡೆಸಬೇಕು ಎಂಬುವುದು ಮಹಾವೀರರ ಮೂಲ ಸಂದೇಶ. ಇದನ್ನು ನಾವು ಚಾಚೂ ತಪ್ಪದೇ ಪಾಲಿಸಬೇಕು’ ಎಂದರು.</p>.<p>ಜೈನ ಸಮುದಾಯದ ಮುಖಂಡರಾದ ಟಿ.ಡಿ.ಬಾಹುಬಲಿ ಬಾಬು, ಸುಭೋದಕುಮಾರ್ ಜೈನ್, ಟಿ.ಜೆ.ನಾಗರಾಜು, ವಿನಯ್ ಜೈನ್ ಮೊದಲಾದವರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-17-921068145</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಮಹಾವೀರ ಜಯಂತಿ ಪ್ರಯುಕ್ತ ದಿಗಂಬರ ಜೈನ ಸಮಾಜದ ವತಿಯಿಂದ ನಗರದಲ್ಲಿ ಮಂಗಳವಾರ ಮಹಾವೀರ ಪುತ್ಥಳಿ ಮೆರವಣಿಗೆ ನಡೆಯಿತು.</p>.<p>ಚಿಕ್ಕಪೇಟೆಯಲ್ಲಿರುವ ಜೈನ ದೇವಾಲಯದ ಬಳಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಎಂ.ಜಿ.ರಸ್ತೆ ಮೂಲಕ ಬಿ.ಎಚ್.ರಸ್ತೆಯಲ್ಲಿ ಸಾಗಿತು. ಜೈನ ಭವನದ ಬಳಿ ಮೆರವಣಿಗೆ ಕೊನೆಯಾಯಿತು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.</p>.<p>ಜೈನ ಸಮುದಾಯದ ಮುಖಂಡ ಸುರೇಶ್ ಕುಮಾರ್ ಮಾತನಾಡಿ, ‘ಜಗತ್ತು ಮಹಾವೀರರ ಅಹಿಂಸಾ ಮಾರ್ಗ ಪಾಲಿಸಬೇಕು. ಎಲ್ಲರೂ ಶಾಂತಿಯಿಂದ ಬದುಕು ನಡೆಸಬೇಕು ಎಂಬುವುದು ಮಹಾವೀರರ ಮೂಲ ಸಂದೇಶ. ಇದನ್ನು ನಾವು ಚಾಚೂ ತಪ್ಪದೇ ಪಾಲಿಸಬೇಕು’ ಎಂದರು.</p>.<p>ಜೈನ ಸಮುದಾಯದ ಮುಖಂಡರಾದ ಟಿ.ಡಿ.ಬಾಹುಬಲಿ ಬಾಬು, ಸುಭೋದಕುಮಾರ್ ಜೈನ್, ಟಿ.ಜೆ.ನಾಗರಾಜು, ವಿನಯ್ ಜೈನ್ ಮೊದಲಾದವರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-17-921068145</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>