<p><strong>ಶಿರಾ</strong>: ತಾಲ್ಲೂಕಿನ ನಿಂಬೆಮರದಹಳ್ಳಿಯಲ್ಲಿ ತಂದೆ ಮಗಳನ್ನು ಕೊಲೆ ಮಾಡಿದ್ದು, ತಿಂಗಳ ನಂತರ ಕೃತ್ಯ ಗೊತ್ತಾಗಿದೆ. ಗ್ರಾಮದ ಎನ್.ಟಿ.ಮೇಘನಾ (17) ಮೃತರು. ಆರೋಪಿ ತಿಮ್ಮರಾಯಪ್ಪ (48) ಅವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಮೇಘನಾ ತನ್ನ ಸಂಬಂಧಿಕ ಹುಡುಗನನ್ನು ಪ್ರೀತಿಸುತ್ತಿದ್ದರು. 18 ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದಕ್ಕೆ ಮೇಘನಾ ತಾಯಿ ಒಪ್ಪಿದ್ದರು. ಆದರೆ, ತಂದೆ ತಿಮ್ಮರಾಯಪ್ಪಗೆ ಇಷ್ಟವಿರಲಿಲ್ಲ. ಮದುವೆ ತಡೆಯಲು ಮಗಳನ್ನು ಕೊಲೆ ಮಾಡುವ ನಿರ್ಧಾರಕ್ಕೆ ಅವರು ಬಂದಿದ್ದರು.</p>.<p>ಏ.16ರಂದು ಸಂಜೆ ತಿಮ್ಮರಾಯಪ್ಪ ಮಗಳನ್ನು ಕರೆದುಕೊಂಡು ಹೋಗಿ ತೋಟದ ಬಾವಿಗೆ ತಳ್ಳಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಬಳಿಕ ಗುಂಡಿ ತೆಗೆದು ಹೂತಿದ್ದರು. ಇದಾದ ಬಳಿಕ ಮೂರು–ನಾಲ್ಕು ದಿನ ಮಗಳನ್ನು ಹುಡುಕಾಡುತ್ತಿರುವಂತೆ ನಾಟಕವನ್ನೂ ಮಾಡಿದ್ದರು.</p>.<p>ಏ.19ರಂದು ಮೇಘನಾ ತಾಯಿ ನಿರ್ಮಲಾ ಮಗಳು ನಾಪತ್ತೆ ಆಗಿದ್ದಾರೆ ಎಂದು ಕಳ್ಳಂಬೆಳ್ಳ ಠಾಣೆಗೆ ದೂರು ನೀಡಿದ್ದರು. ವಾರದ ಬಳಿಕ ತಿಮ್ಮರಾಯಪ್ಪ ಸಹ ನಾಪತ್ತೆಯಾಗಿದ್ದರು. ‘ಪತಿಯೂ ಕಾಣಿಸುತ್ತಿಲ್ಲ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಹುಡುಕಿಕೊಡಿ’ ಎಂದು ನಿರ್ಮಲಾ ಮತ್ತೊಂದು ದೂರು ಸಲ್ಲಿಸಿದ್ದರು.</p>.<p>ಕಾರ್ಯಪ್ರವೃತ್ತರಾದ ಪೊಲೀಸರು ಶನಿವಾರ ತಿಮ್ಮರಾಯಪ್ಪ ಅವರನ್ನು ಪತ್ತೆ ಹಚ್ಚಿದ್ದಾರೆ. ನಂತರ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಮಗಳ ಕೊಲೆ ವಿಚಾರ ಬಾಯಿ ಬಿಟ್ಟರು ಎಂದು ಪೊಲೀಸರು ತಿಳಿಸಿದರು.</p>.<p>ಇಂದು ಶವ ಹೊರಕ್ಕೆ: ‘ತಹಶೀಲ್ದಾರ್ ಸಮ್ಮುಖದಲ್ಲಿ ಸೋಮವಾರ ಮೃತದೇಹ ತೆಗೆಯಲಾಗುತ್ತದೆ. ನಂತರಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-51-1500107451</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ</strong>: ತಾಲ್ಲೂಕಿನ ನಿಂಬೆಮರದಹಳ್ಳಿಯಲ್ಲಿ ತಂದೆ ಮಗಳನ್ನು ಕೊಲೆ ಮಾಡಿದ್ದು, ತಿಂಗಳ ನಂತರ ಕೃತ್ಯ ಗೊತ್ತಾಗಿದೆ. ಗ್ರಾಮದ ಎನ್.ಟಿ.ಮೇಘನಾ (17) ಮೃತರು. ಆರೋಪಿ ತಿಮ್ಮರಾಯಪ್ಪ (48) ಅವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಮೇಘನಾ ತನ್ನ ಸಂಬಂಧಿಕ ಹುಡುಗನನ್ನು ಪ್ರೀತಿಸುತ್ತಿದ್ದರು. 18 ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದಕ್ಕೆ ಮೇಘನಾ ತಾಯಿ ಒಪ್ಪಿದ್ದರು. ಆದರೆ, ತಂದೆ ತಿಮ್ಮರಾಯಪ್ಪಗೆ ಇಷ್ಟವಿರಲಿಲ್ಲ. ಮದುವೆ ತಡೆಯಲು ಮಗಳನ್ನು ಕೊಲೆ ಮಾಡುವ ನಿರ್ಧಾರಕ್ಕೆ ಅವರು ಬಂದಿದ್ದರು.</p>.<p>ಏ.16ರಂದು ಸಂಜೆ ತಿಮ್ಮರಾಯಪ್ಪ ಮಗಳನ್ನು ಕರೆದುಕೊಂಡು ಹೋಗಿ ತೋಟದ ಬಾವಿಗೆ ತಳ್ಳಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಬಳಿಕ ಗುಂಡಿ ತೆಗೆದು ಹೂತಿದ್ದರು. ಇದಾದ ಬಳಿಕ ಮೂರು–ನಾಲ್ಕು ದಿನ ಮಗಳನ್ನು ಹುಡುಕಾಡುತ್ತಿರುವಂತೆ ನಾಟಕವನ್ನೂ ಮಾಡಿದ್ದರು.</p>.<p>ಏ.19ರಂದು ಮೇಘನಾ ತಾಯಿ ನಿರ್ಮಲಾ ಮಗಳು ನಾಪತ್ತೆ ಆಗಿದ್ದಾರೆ ಎಂದು ಕಳ್ಳಂಬೆಳ್ಳ ಠಾಣೆಗೆ ದೂರು ನೀಡಿದ್ದರು. ವಾರದ ಬಳಿಕ ತಿಮ್ಮರಾಯಪ್ಪ ಸಹ ನಾಪತ್ತೆಯಾಗಿದ್ದರು. ‘ಪತಿಯೂ ಕಾಣಿಸುತ್ತಿಲ್ಲ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಹುಡುಕಿಕೊಡಿ’ ಎಂದು ನಿರ್ಮಲಾ ಮತ್ತೊಂದು ದೂರು ಸಲ್ಲಿಸಿದ್ದರು.</p>.<p>ಕಾರ್ಯಪ್ರವೃತ್ತರಾದ ಪೊಲೀಸರು ಶನಿವಾರ ತಿಮ್ಮರಾಯಪ್ಪ ಅವರನ್ನು ಪತ್ತೆ ಹಚ್ಚಿದ್ದಾರೆ. ನಂತರ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಮಗಳ ಕೊಲೆ ವಿಚಾರ ಬಾಯಿ ಬಿಟ್ಟರು ಎಂದು ಪೊಲೀಸರು ತಿಳಿಸಿದರು.</p>.<p>ಇಂದು ಶವ ಹೊರಕ್ಕೆ: ‘ತಹಶೀಲ್ದಾರ್ ಸಮ್ಮುಖದಲ್ಲಿ ಸೋಮವಾರ ಮೃತದೇಹ ತೆಗೆಯಲಾಗುತ್ತದೆ. ನಂತರಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-51-1500107451</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>