ಬ್ಯಾಂಕ್ ಶಾಖೆಯಲ್ಲಿ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರು ಖಾತೆ ತೆರೆದಿದ್ದಾರೆ. ಆದರೆ ನಿರಂತರವಾಗಿ ಬ್ಯಾಂಕ್ನಲ್ಲಿ ವ್ಯವಹಾರ ನಡೆಸಿಲ್ಲ. ಆರು ತಿಂಗಳು, ವರ್ಷದ ನಂತರ ಬರುವ ಗ್ರಾಹಕರಿಗೆ ಖಾತೆತಾತ್ಕಾಲಿಕವಾಗಿ ಸ್ಥಗಿತವಾಗಿದೆ ಎನ್ನುತ್ತಿದ್ದಾರೆ. ಚಾಲನೆ ನೀಡಲು ಹೇಳಿದರೆ ತಾಂತ್ರಿಕ ಕಾರಣ ಹೇಳಿ ನಾಳೆ ಬನ್ನಿ ಎನ್ನುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.