ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: 11 ಮೇಕೆಗಳ ರಕ್ತ ಹೀರಿದ ಚಿರತೆ

Last Updated 13 ಜೂನ್ 2020, 7:56 IST
ಅಕ್ಷರ ಗಾತ್ರ

ತುಮಕೂರು: ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸಮೀಪದ ಅನುಪಲು ಗ್ರಾಮದ ಕರಿರಂಗಯ್ಯ ಅವರ ಮೇಕೆ ರೊಪ್ಪಕ್ಕೆ ಶುಕ್ರವಾರ ರಾತ್ರಿ ಚಿರತೆ ನುಗ್ಗಿ 11 ಮೇಕೆಗಳ ರಕ್ತ ಹೀರಿದೆ.

ಕರಿರಂಗಯ್ಯ ಅನಾರೋಗ್ಯದಿಂದ ಬಳಲುತ್ತಿದ್ದು ತುಮಕೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ನಿಗಾ ವಹಿಸಲು ಮಕ್ಕಳು ಜತೆಯಲ್ಲಿ ಇದ್ದಾರೆ. ಮನೆಯಲ್ಲಿ ಕರಿರಂಗಯ್ಯ ಅವರ ಪತ್ನಿ ಹಾಗೂ ಹೆಣ್ಣು ಮಕ್ಕಳು ಇದ್ದಾರೆ.

ಶನಿವಾರ ಬೆಳಿಗ್ಗೆ ರೊಪ್ಪದಿಂದ ಚಿರತೆ ಹೊರ ಹೋಗಿದೆ. ಇದನ್ನು ಮನೆಯವರು ನೋಡಿದ್ದಾರೆ. ರೊಪ್ಪದ ತುಂಬಾ ರಕ್ತ ಹರಿದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT