ತುಮಕೂರು: ಇಲ್ಲಿನ ಕೆಲವುಪ್ರದೇಶಗಳಲ್ಲಿ ವಾರ್ಷಿಕ ವಾಡಿಕೆಗಿಂತಲೂ ಹೆಚ್ಚುಮಳೆಯಾಗಿದೆ.
ರಾಗಿ ಹೊಲಗಳು ಸಮೃದ್ಧವಾಗಿ ಬೆಳೆದು ನಿಂತಿದ್ದು,ತೆನೆಯ ಭಾರ ಹೆಚ್ಚಾಗಿ ನೆಲಕ್ಕೆ ಬಾಗುತ್ತಿದೆ. ಇದರಿಂದರೈತರುಆತಂಕಕ್ಕೆ ಒಳಗಾಗಿದ್ದಾರೆ.
ತೆನೆಗಳು ನೆಲಕ್ಕೆ ತಾಗಿದರೆ ಮೊಳಕೆ ಬಂದುಬೆಳೆ ಹಾಳುಗುತ್ತದೆ. ಮೇವು ಸಹ ಹಾಳುಗುತ್ತದೆ. ಇದು ಅತ್ಯಂತ ಅಪಾಯ ಸ್ಥಿತಿ.ಹದಿನೈದು ವರ್ಷಗಳ ನಂತರ ಹೊಲಗಳಲ್ಲಿ ಈ ರೀತಿಯಸಮೃದ್ಧತೆ ನೋಡುತ್ತಿದ್ದೇವೆಎನ್ನುತ್ತಾರೆಮುದಿಗೌಡನ ಹಳ್ಳಿ ಕಾಮಣ್ಣ.
ಈ ಬಾರಿಯ ಮಳೆಯುಬೆಳೆಯಇಳುವರಿ ಹೆಚ್ಚಿಸಿದೆ.ಇಳುವರಿಯಿಂದ ರಾಗಿ ಬೆಲೆಯು ಕುಸಿಯುವ ಹಂತ ತಲುಪಿದೆ.ಬೆಲೆ ಕುಸಿತದಲ್ಲಿರೈತರಸ್ಥಿತಿ ಚಿಂತಾಜನಕಎನ್ನುತ್ತಾರೆಜೋನಿಗರಹಳ್ಳಿ ರವೀಶ್.