<p>ತುರುವೇಕೆರೆ: ಯುಗಾದಿ ವರ್ಷತೊಡಕು ಪ್ರಯುಕ್ತ ತಾಲ್ಲೂಕಿನಾದ್ಯಂತ ಮಾಂಸ, ಮೀನು, ಕೋಳಿ ಖರೀದಿಸಲು ಶುಕ್ರವಾರ ಜನರು ಮುಗಿಬಿದ್ದರು.</p>.<p>ಪಟ್ಟಣದ ದಬ್ಬೇಘಟ್ಟ, ಮಾಯಸಂದ್ರ, ತಿಪಟೂರು ಮತ್ತು ಬಾಣಸಂದ್ರ ರಸ್ತೆಯ ಕೋಳಿ, ಟಗರು, ಹೋತದ ಮಾಂಸದಂಗಡಿ ಮುಂದೆ ಜನರು ಮುಂಜಾನೆಯಿಂದಲೇ ದೂರದ ಹಳ್ಳಿಗಳಿಂದ ಮಾಂಸ ಖರೀದಿಸಲು ಬಂದಿದ್ದರು. ಬಿಸಿಲಿನ ತಾಪ ಹೆಚ್ಚಾದಂತೆ ಅಂಗಡಿ ಮಾಲೀಕರು ಗ್ರಾಹಕರಿಗೆ ಶಾಮಿಯಾನ ವ್ಯವಸ್ಥೆ ಕೂಡ ಮಾಡಿಸಿದರು.</p>.<p>ತಾಲ್ಲೂಕಿನ ದಂಡಿನಶಿವರ, ಕುರುಬರಹಳ್ಳಿ ಬ್ಯಾಲಾ, ಬಾಣಸಂದ್ರ, ಸುಂಕಲಾಪುರ, ದಬ್ಬೇಘಟ್ಟ, ಕೊಂಡಜ್ಜಿ, ಮುನಿಯೂರು, ದೊಡ್ಡಾಘಟ್ಟ, ಕಣತೂರು, ಶೆಟ್ಟಿಗೊಂಡನಹಳ್ಳಿ, ವಿವೇಕಾನಂದ ನಗರ, ಗೋರಾಘಟ್ಟ, ಮಾಯಸಂದ್ರ, ಕಸಬಾ ಮತ್ತು ದಬ್ಬೇಘಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಗುಡ್ಡೆ ಬಾಡಿಗೆ ಭಾರಿ ಬೇಡಿಕೆ ಇತ್ತು.</p>.<p>ಕೆಲ ವ್ಯಾಪಾರಿಗಳು ಫಾರ್ಮ್ಹೌಸ್ ಮತ್ತು ರೈತರು ಸಾಕಿದ ಹೋತ ಮತ್ತು ಟಗರುಗಳನ್ನು ತಂದು ಕೆ.ಜಿಗೆ ₹650ರಿಂದ ₹800 ರವರೆಗೆ ಮಾರಾಟ ಮಾಡಿದರು. ಅಂಗಡಿ ಮಾಂಸಕ್ಕಿಂತ ಗುಡ್ಡೇ ಬಾಡಿಗೆ ಜನರು ಹೆಚ್ಚಿನ ಆಸಕ್ತಿ ತೋರಿದರು. ಗ್ರಾಹಕರು ಮಧ್ಯಾಹ್ನದವರೆಗೂ ಮಾಂಸ ಖರೀದಿಯಲ್ಲೇ ನಿರತರಾಗಿದ್ದರು.</p>.<p>ಪಟ್ಟಣದ ಕೆರೆಕೋಡಿ ಬಳಿಯ ಮೀನಿನ ಅಂಗಡಿ ಮುಂದೆ ಮುಂಜಾನೆಯಿಂದಲೇ ಜನರು ಜಮಾಮಿಸಿದ್ದರು. ಏಡಿ, ಜಿಲೇಬಿ, ಕಾಟ್ಲಾ, ರೋಹು ಮೀನಿಗಾಗಿ 150–ಎ ರಾಷ್ಟ್ರೀಯ ಹೆದ್ದಾರಿವರೆಗೆ ಸರದಿಯಲ್ಲಿ ನಿಂತಿದ್ದರು. ಮೀನಿನ ಬೆಲೆ ಹೆಚ್ಚಿದ್ದರೂ ಜನರ ಖರೀದಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ.</p>.<p>ಬಹುಪಾಲು ಗ್ರಾಮಗಳಲ್ಲಿ ಒಂದಿಷ್ಟು ಜನರು ಸೇರಿಕೊಂಡು ವರ್ಷಕ್ಕೊಂದು ಚೀಟಿ ಹಾಕಿ ಅದರಿಂದ ಬಂದ ಹಣದಿಂದ ಯುಗಾದಿ ವರ್ಷತೊಡಕಿನಂದು ಗುಡ್ಡೇಬಾಡು ಮಾಡಿಕೊಂಡು ಹಂಚಿಕೊಂಡರು. ಬಾಗೇವಾಡಿ ಮತ್ತು ಮಹಾರಾಷ್ಟ್ರದಿಂದ ತಂದ ಆಡಿನ ಮಾಂಸಕ್ಕೆ ಬೇಡಿಕೆ ಇರಲಿಲ್ಲ ಎಂದು ಗ್ರಾಹಕರೊಬ್ಬರು ತಿಳಿಸಿದರು.</p>.<p>ಪಟ್ಟಣದ ಪ್ರತಿ ಮಾಂಸ ಮತ್ತು ಕೋಳಿಯ ಅಂಗಡಿ ಬಳಿ ರೈತರು, ವ್ಯಾಪಾರಿಗಳು ಕೊತ್ತಂಬರಿ, ಪುದಿನಿ, ಶುಂಠಿ, ನಿಂಬೆ ಹಣ್ಣು ಇಟ್ಟು ವ್ಯಾಪಾರ ಮಾಡಿದರು. ಮೂರು ಸೌತೆಕಾಯಿಗೆ ₹50ರಿಂದ ₹60 ದರ ಇದ್ದರೆ, ಎರಡು ನಿಂಬೆ ಹಣ್ಣಿಗೆ ₹20 ರೂಪಾಯಿ ಬೆಲೆ ಇತ್ತು. ಮುತ್ತಗದ ಎಲೆ, ಅಡಿಕೆ ತಟ್ಟೆ, ಲೋಟ, ಮೊಸರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇತ್ತು.</p>.<p>‘ತಾಲ್ಲೂಕಿನ ಹಲವು ಹಳ್ಳಿಗಳಿಂದ ಗ್ರಾಹಕರು ಐದು, ಹತ್ತು ಕೆ.ಜಿ ಟಗರು, ಹೋತದ ಮಾಂಸ ನೀಡುವಂತೆ ಮುಂಗಡವಾಗಿ ತಿಳಿಸಿದ್ದರು. ಈ ಬಾರಿ 17 ಟಗರು, 19ಕ್ಕೂ ಹೆಚ್ಚು ಹೋತಗಳ ಮಾಂಸ ಮಾರಾಟವಾಯಿತು’ ಎಂದು ಮಾಷಾಲ್ಲ ಅಂಗಡಿ ವ್ಯಾಪಾರಿ ಇರ್ಫಾನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260321-17-1035488583</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುರುವೇಕೆರೆ: ಯುಗಾದಿ ವರ್ಷತೊಡಕು ಪ್ರಯುಕ್ತ ತಾಲ್ಲೂಕಿನಾದ್ಯಂತ ಮಾಂಸ, ಮೀನು, ಕೋಳಿ ಖರೀದಿಸಲು ಶುಕ್ರವಾರ ಜನರು ಮುಗಿಬಿದ್ದರು.</p>.<p>ಪಟ್ಟಣದ ದಬ್ಬೇಘಟ್ಟ, ಮಾಯಸಂದ್ರ, ತಿಪಟೂರು ಮತ್ತು ಬಾಣಸಂದ್ರ ರಸ್ತೆಯ ಕೋಳಿ, ಟಗರು, ಹೋತದ ಮಾಂಸದಂಗಡಿ ಮುಂದೆ ಜನರು ಮುಂಜಾನೆಯಿಂದಲೇ ದೂರದ ಹಳ್ಳಿಗಳಿಂದ ಮಾಂಸ ಖರೀದಿಸಲು ಬಂದಿದ್ದರು. ಬಿಸಿಲಿನ ತಾಪ ಹೆಚ್ಚಾದಂತೆ ಅಂಗಡಿ ಮಾಲೀಕರು ಗ್ರಾಹಕರಿಗೆ ಶಾಮಿಯಾನ ವ್ಯವಸ್ಥೆ ಕೂಡ ಮಾಡಿಸಿದರು.</p>.<p>ತಾಲ್ಲೂಕಿನ ದಂಡಿನಶಿವರ, ಕುರುಬರಹಳ್ಳಿ ಬ್ಯಾಲಾ, ಬಾಣಸಂದ್ರ, ಸುಂಕಲಾಪುರ, ದಬ್ಬೇಘಟ್ಟ, ಕೊಂಡಜ್ಜಿ, ಮುನಿಯೂರು, ದೊಡ್ಡಾಘಟ್ಟ, ಕಣತೂರು, ಶೆಟ್ಟಿಗೊಂಡನಹಳ್ಳಿ, ವಿವೇಕಾನಂದ ನಗರ, ಗೋರಾಘಟ್ಟ, ಮಾಯಸಂದ್ರ, ಕಸಬಾ ಮತ್ತು ದಬ್ಬೇಘಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಗುಡ್ಡೆ ಬಾಡಿಗೆ ಭಾರಿ ಬೇಡಿಕೆ ಇತ್ತು.</p>.<p>ಕೆಲ ವ್ಯಾಪಾರಿಗಳು ಫಾರ್ಮ್ಹೌಸ್ ಮತ್ತು ರೈತರು ಸಾಕಿದ ಹೋತ ಮತ್ತು ಟಗರುಗಳನ್ನು ತಂದು ಕೆ.ಜಿಗೆ ₹650ರಿಂದ ₹800 ರವರೆಗೆ ಮಾರಾಟ ಮಾಡಿದರು. ಅಂಗಡಿ ಮಾಂಸಕ್ಕಿಂತ ಗುಡ್ಡೇ ಬಾಡಿಗೆ ಜನರು ಹೆಚ್ಚಿನ ಆಸಕ್ತಿ ತೋರಿದರು. ಗ್ರಾಹಕರು ಮಧ್ಯಾಹ್ನದವರೆಗೂ ಮಾಂಸ ಖರೀದಿಯಲ್ಲೇ ನಿರತರಾಗಿದ್ದರು.</p>.<p>ಪಟ್ಟಣದ ಕೆರೆಕೋಡಿ ಬಳಿಯ ಮೀನಿನ ಅಂಗಡಿ ಮುಂದೆ ಮುಂಜಾನೆಯಿಂದಲೇ ಜನರು ಜಮಾಮಿಸಿದ್ದರು. ಏಡಿ, ಜಿಲೇಬಿ, ಕಾಟ್ಲಾ, ರೋಹು ಮೀನಿಗಾಗಿ 150–ಎ ರಾಷ್ಟ್ರೀಯ ಹೆದ್ದಾರಿವರೆಗೆ ಸರದಿಯಲ್ಲಿ ನಿಂತಿದ್ದರು. ಮೀನಿನ ಬೆಲೆ ಹೆಚ್ಚಿದ್ದರೂ ಜನರ ಖರೀದಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ.</p>.<p>ಬಹುಪಾಲು ಗ್ರಾಮಗಳಲ್ಲಿ ಒಂದಿಷ್ಟು ಜನರು ಸೇರಿಕೊಂಡು ವರ್ಷಕ್ಕೊಂದು ಚೀಟಿ ಹಾಕಿ ಅದರಿಂದ ಬಂದ ಹಣದಿಂದ ಯುಗಾದಿ ವರ್ಷತೊಡಕಿನಂದು ಗುಡ್ಡೇಬಾಡು ಮಾಡಿಕೊಂಡು ಹಂಚಿಕೊಂಡರು. ಬಾಗೇವಾಡಿ ಮತ್ತು ಮಹಾರಾಷ್ಟ್ರದಿಂದ ತಂದ ಆಡಿನ ಮಾಂಸಕ್ಕೆ ಬೇಡಿಕೆ ಇರಲಿಲ್ಲ ಎಂದು ಗ್ರಾಹಕರೊಬ್ಬರು ತಿಳಿಸಿದರು.</p>.<p>ಪಟ್ಟಣದ ಪ್ರತಿ ಮಾಂಸ ಮತ್ತು ಕೋಳಿಯ ಅಂಗಡಿ ಬಳಿ ರೈತರು, ವ್ಯಾಪಾರಿಗಳು ಕೊತ್ತಂಬರಿ, ಪುದಿನಿ, ಶುಂಠಿ, ನಿಂಬೆ ಹಣ್ಣು ಇಟ್ಟು ವ್ಯಾಪಾರ ಮಾಡಿದರು. ಮೂರು ಸೌತೆಕಾಯಿಗೆ ₹50ರಿಂದ ₹60 ದರ ಇದ್ದರೆ, ಎರಡು ನಿಂಬೆ ಹಣ್ಣಿಗೆ ₹20 ರೂಪಾಯಿ ಬೆಲೆ ಇತ್ತು. ಮುತ್ತಗದ ಎಲೆ, ಅಡಿಕೆ ತಟ್ಟೆ, ಲೋಟ, ಮೊಸರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇತ್ತು.</p>.<p>‘ತಾಲ್ಲೂಕಿನ ಹಲವು ಹಳ್ಳಿಗಳಿಂದ ಗ್ರಾಹಕರು ಐದು, ಹತ್ತು ಕೆ.ಜಿ ಟಗರು, ಹೋತದ ಮಾಂಸ ನೀಡುವಂತೆ ಮುಂಗಡವಾಗಿ ತಿಳಿಸಿದ್ದರು. ಈ ಬಾರಿ 17 ಟಗರು, 19ಕ್ಕೂ ಹೆಚ್ಚು ಹೋತಗಳ ಮಾಂಸ ಮಾರಾಟವಾಯಿತು’ ಎಂದು ಮಾಷಾಲ್ಲ ಅಂಗಡಿ ವ್ಯಾಪಾರಿ ಇರ್ಫಾನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260321-17-1035488583</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>