ತುಮಕೂರು:ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರ ಬಳಿ ಭಾನುವಾರ ರಾತ್ರಿ ಮರಕ್ಕೆ ಕಾರು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ದರ್ಶನ್ (23), ಭರತ್ (22) ಮೃತರು. ಈ ಪೈಕಿದರ್ಶನ್ ಎಂಬುವವರು ಹುಳಿಯಾರಿನ ಬಸ್ ಏಜೆಂಟ್ ಕೋಳಿ ರಾಜಣ್ಣ ಅವರ ಮಗನಾಗಿದ್ದು, ಭರತ್ ಎಂಬುವವರುರಾಜಣ್ಣ ಅವರ ಅಕ್ಕನ ಮಗನಾಗಿದ್ದಾನೆ.
ಮೈಸೂರಿನಲ್ಲಿ ಭಾನುವಾರ ಸಂಬಂಧಿಕರ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ಪೊಲೀಸರು ಹೇಳಿದ್ದಾರೆ.