ತುಮಕೂರು: ನಗರ ಹೊರವಲಯದ ಮರಳೂರು ಕೆರೆ ಏರಿಯ ಮೇಲೆ ಮಂಗಳವಾರ ರಾತ್ರಿ ಕಾರು ಮತ್ತು ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಅರುಣ (43) ಮತ್ತು ಚೇತನ್ (45) ಮೃತ ದುರ್ದೈವಿಗಳು. ತುಮಕೂರು ಕಡೆಯಿಂದ ಹೊರಟಿದ್ದ ಕಾರು ಎದುರಿನಿಂದ ಬರುತ್ತಿದ್ದ ಲಾರಿ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.